Thursday , September 19 2024
Breaking News

Recent Posts

ಕ್ಷೇತ್ರ ಅಭಿವೃದ್ಧಿಗೆ ಮತದಾನದ ಮೂಲಕ ನನಗೆ ಕೂಲಿ ನೀಡಿ,:- ಅಮರೇಗೌಡ ಪಾಟೀಲ್ ಬಯ್ಯಾಪುರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ; ನಾನು ವಿರೋಧ ಪಕ್ಷದಲ್ಲಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಅನುದಾನಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ ಅದರ ಪ್ರತಿಫಲವಾಗಿ ಮತದಾರರು ನನಗೆ ಮತದಾನದ ಮೂಲಕ ಕೂಲಿ ನೀಡಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಶುಕ್ರವಾರದಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ವಿತರಿಸುವ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು, ಚುನಾವಣೆ ಸಂದರ್ಭದಲ್ಲಿ ಯುವಕರು ಯೋಚಿಸಿ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ …

Read More »

ತಾವರಗೇರಾ: ನೂತನ ಎಸ್ ಬಿ ಐ ಗ್ರಾಹಕರ ಸೇವಾ ಕೇಂದ್ರ ಉದ್ಘಾಟನೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಅಯ್ಯನಗೌಡರ್ ಕಾಂಪ್ಲೆಕ್ಸ್ ನ ರಕ್ಷಿತಾ ಮೊಬೈಲ್ಸ್ ಅಂಗಡಿ ಹತ್ತಿರ ನೂತನ ಎಸ್ ಬಿ ಐ ಗ್ರಾಹಕರ ಸೇವಾ ಕೇಂದ್ರವನ್ನು ಸ್ಥಳೀಯ ಎಸ್ ಬಿ ಐ ವ್ಯವಸ್ಥಾಪಕರಾದ ಮಹಮ್ಮದ್ ಖಾದ್ರಿ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರ ಸೇವೆಗಾಗಿ ನೂತನವಾಗಿ ಗ್ರಾಹಕರ ಕೇಂದ್ರ ತೆರೆಯಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂಧರ್ಭದಲ್ಲಿ ಉದ್ಯಮಿಗಳಾದ ಅಯ್ಯನಗೌಡ ಮಾಲಿ ಪಾಟೀಲ, ನಾದಿರಪಾಷಾ ಮುಲ್ಲಾ, ಮುಖಂಡರಾದ ವೀರಭದ್ರಪ್ಪ ನಾಲತವಾಡ, …

Read More »

ತಾವರಗೇರಾ:- ರಸ್ತೆ ಅಪಘಾತ ವ್ಯಕ್ತಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮುದುಗಲ್ ರಸ್ತೆಯ ಗೊಲ್ಲರಹಳ್ಳಿ ಹತ್ತಿರ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಜರುಗಿದೆ. ಮೃತ ವ್ಯಕ್ತಿಯು ಯಾರೆಂದು ಇದುವರೆಗೆ ಪತ್ತೆಯಾಗಿರುವುದಿಲ್ಲ ಸಾರ್ವಜನಿಕರಿಗೆ ಮಾಹಿತಿ ಸಿಕ್ಕಲ್ಲಿ ಮುದುಗಲ್ ಠಾಣೆಯ ಪಿಎಸ್ ಐ ಅವರ ಮೊಬೈಲ್ ನಂಬರ:- 9480803857 ಗೆ ತಿಳಿಸಲು ಮುದುಗಲ್ ಠಾಣೆಯ ಪಿಎಸ್ ಐ ತಿಳಿಸಿದ್ದಾರೆ. ಈ ಕುರಿತು ಮುದುಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »
error: Content is protected !!