Thursday , September 19 2024
Breaking News
Home / Breaking News / ಮುದಗಲ್ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಿರ್ದೇಶಕ ಭೇಟಿ : ಅಧಿಕಾರಿಗಳ ನಿರ್ಲಕ್ಷ 

ಮುದಗಲ್ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಿರ್ದೇಶಕ ಭೇಟಿ : ಅಧಿಕಾರಿಗಳ ನಿರ್ಲಕ್ಷ 

ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಸ್ಥಳೀಯ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಾಮ ನಿರ್ದೇಶನ  ನಿರ್ದೇಶಕ ನಾಗರಾಜ್ ಬಿರಾದಾರ್ ಭೇಟಿ ನೀಡಿದರು. ಕಾರ್ಯಾಲಯದಲ್ಲಿದ್ದ ಪುರಸಭೆ ಮುಖ್ಯಧಿಕಾರಿಗಳು ಅವರಿಗೆ ಸರಿಯಾದ ರೀತಿಯಲ್ಲಿ  ಸ್ಪಂದನೆ ನೀಡಲಿಲ್ಲ ಹಾಗೂ ಪುರಸಭೆ ಅಧಿಕಾರಿಗಳು ಕೊಳಗೇರಿ ಪ್ರದೇಶಗಳ ವೀಕ್ಷಣೆಗೆ ಯಾವುದೇ ಪೂರ್ವ ಸಿದ್ದತೆಗಳು ಮಾಡದಿರುವುದಿಲ್ಲ ನಾವು ಪಟ್ಟಣಕ್ಕೆ ಭೇಟಿ ಕೊಡುವ  ವಿಷಯವನ್ನ 2 ದಿನದ ಮುಂಚೆಯೇ ತಿಳಿಸಿದ್ದರು ಕೂಡ ಅಧಿಕಾರಿಗಳು ಸ್ಪಂದನೆ ನೀಡಿರುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ರಾಜ್ಯ ಕೊಳಗೇರಿ ನಿಗಮದ ನಾಮ ನಿರ್ದೇಶನ ನಿರ್ದೇಶಕ ನಾಗರಾಜ್ ಬಿರಾದಾರ್  ಅಸಮಾಧಾನ ವ್ಯಕ್ತಪಡಿಸಿದರು.ಪುರಸಭೆ ಮುಖ್ಯಾಧಿಕಾರಿ ಮರೀಲಿಂಗಪ್ಪ  ನಮಗೆ ಜಿಲ್ಲೆಯಿಂದ ಯಾವುದೇ ಮಾಹಿತಿ ಬಂದಿಲ್ಲ ಹೀಗಾಗಿ ಪೂರ್ವ  ಸಿದ್ಧತೆ ಮಾಡಿಕೊಂಡಿಲ್ಲ ಎಂದರು. ನಂತರ ಕಾರ್ಯಾಲಯದ ಪರವಾಗಿ ನಿರ್ದೇಶಕರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭ ಮುಖಂಡರಾದ  ಗುರುಬಸಪ್ಪ ಸಜ್ಜನ್, ಅಮಿರ್ ಬೇಗ್ ಉಸ್ತಾದ್, ದುರಗಪ್ಪ ಕಟ್ಟಿಮನಿ, ನಾಗರಾಜ್,ಮಲ್ಲಪ್ಪ ಮಟೂರು, ಮಂಜುನಾಥ್ ನಂದವಾಡಗಿ ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!