Sunday , September 8 2024
Breaking News
Home / Breaking News / ಮುಖ್ಯಮಂತ್ರಿ ಪದಕ ಪಡೆದ ತಾವರಗೇರಾ ಹೆಮ್ಮೆಯ ಪುತ್ರ..!

ಮುಖ್ಯಮಂತ್ರಿ ಪದಕ ಪಡೆದ ತಾವರಗೇರಾ ಹೆಮ್ಮೆಯ ಪುತ್ರ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಪ್ರತಿಭಾವಂತ ಹಾಗೂ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಬಸಪ್ಪ ನಾಲತ್ವಾಡ ಅವರ ಪುತ್ರ ಮಂಜುನಾಥ್ ಮಂಗಳವಾರದಂದು ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿ ಪದಕ ಸಮಾರಂಭದಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ್ ಅವರಿಂದ ಮುಖ್ಯಮಂತ್ರಿ ಪದಕ ಸ್ವೀಕರಿಸಿದರು.

 

ತನ್ನ ವಿಭಿನ್ನ ಪ್ರತಿಭೆಯ ಮೂಲಕ ಜಿಲ್ಲೆ ಹಾಗೂ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಮಂಜುನಾಥ್ ಪ್ರಸ್ತುತ ಜಿಲ್ಲೆಯ ಕಾರಟಗಿ ತಾಲೂಕ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ವಿವಿಧ ಗಣ್ಯರಿಂದ ಹಲವಾರು ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿರುವ ಮಂಜುನಾಥ್ ಇವರು ಮುಂದೆ ಕೂಡ ತಾವರಗೇರಿಯ ಕೀರ್ತಿಪತಾಕೆಯನ್ನು ಹಾರಿಸಲಿ ಎಂದು ಪಟ್ಟಣದ ಜನತೆಯ ಹಾಗೂ ಉದಯವಾಹಿನಿಯ ಆಶಯವಾಗಿದೆ.

 

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!