Thursday , September 19 2024
Breaking News
Home / Breaking News / ತಾವರಗೇರಾ: ಬೈಕ್ ಗೆ ಕಾರ ಡಿಕ್ಕಿ, ಸ್ಥಳದಲ್ಲೇ ಯುವಕ ಸಾವು..!

ತಾವರಗೇರಾ: ಬೈಕ್ ಗೆ ಕಾರ ಡಿಕ್ಕಿ, ಸ್ಥಳದಲ್ಲೇ ಯುವಕ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಮದುವೆ ಗಾಗಿ ಕಲ್ಯಾಣ ಮಂಟಪ ನೋಡಲು ಬಂದಿದ್ದ ಯುವಕನೊಬ್ಬ ಕಾರು ಡಿಕ್ಕಿ ಯಿಂದಾಗಿ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆಯೊಂದು ಸಮೀಪದ ಹುಲಿಹೈದರ ಹತ್ತಿರ ನಡೆದಿದೆ.

ಮೃತ ಯುವಕನನ್ನು ಕನಕಗಿರಿ ತಾಲೂಕಿನ ಹನುಮನಾಳ ಗ್ರಾಮದ ಹನುಮನಗೌಡ ಮಾಲಿಪಾಟೀಲ ಎಂದು ಗುರುತಿಸಲಾಗಿದ್ದು ಮೃತ ಯುವಕನಿಗೆ ಡಿಸೆಂಬರ್ 15 ರಂದು ಕಲ್ಮಂಗಿಯ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು ಆದ ಕಾರಣ ಸ್ವಗ್ರಾಮ ಹನುಮನಾಳದಿಂದ ತಾವರಗೇರಿಗೆ ತನ್ನ ಬೈಕ್ ಮೂಲಕ ಕಲ್ಯಾಣ ಮಂಟಪ ನೋಡಲು ಬರುತ್ತಿದ್ದಾಗ ತಾವರಗೇರಿಯಿಂದ ವೇಗವಾಗಿ ಬಂದ ಕಾರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನ ಬಲಗಾಲು ತುಂಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಯುವಕನು ಬೆಂಗಳೂರಿನ ಬಯೋ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾನೆ ಎನ್ನಲಾಗಿದೆ.
ದುರದೃಷ್ಟವಶಾತ್ ಮದುವೆ ಆಗುವ ಮುಂಚೆಯೆ ಮಸಣ ಸೇರಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಅಜಾಗರುಕತೆ ಹಾಗೂ ನಿರ್ಲಕ್ಷ್ಯ ತನದಿಂದಾಗಿ ಕಾರು ಚಲಾಯಿಸಿದ ತಾವರಗೇರಾ ಪಟ್ಟಣದ ಉಮಾಮಹೇಶ್ವರ ಎಂಬುವವರ ವಿರುದ್ದ ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!