Tuesday , September 17 2024
Breaking News
Home / Breaking News / ಅಪಘಾತವಲ್ಲ “ಕೊಲೆ ” ಆರೋಪಿ ಬಂಧನ..!

ಅಪಘಾತವಲ್ಲ “ಕೊಲೆ ” ಆರೋಪಿ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ

ಕಾರಟಗಿ:- ಪಟ್ಟಣದ ನಾಗನಕಲ್ಲ ಹತ್ತಿರ ಎರಡು ದಿನಗಳ ಹಿಂದೆ ಬೈಕ್ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಮೃತ ಪಟ್ಟಿದ್ದಾನೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಅಪಘಾತ ದಿಂದಾದ ಸಾವಲ್ಲ ಕೊಲೆಯಾಗಿದೆ ಎಂದು ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆ ಮಾಡಿದ ಆರೋಪಿ ಗುಡೂರಿನ ಗೌಡಪ್ಪ ಅಲಿಯಾಸ್ ಗರುಡಪ್ಪ ಎಂದು ಗುರುತಿಸಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಕಾರಟಗಿಯ ನಜೀರಸಾಬ ಕಾಲೋನಿಯ ನಿವಾಸಿ ರಾಘವೇಂದ್ರ ರೆಡ್ಡಿ ಎನ್ನಲಾಗಿದೆ, ರಾಘವೇಂದ್ರ ರೆಡ್ಡಿ ಹಾಗೂ ಕೊಲೆಗಾರ ಗರುಡಪ್ಪನ ತಾಯಿಯೊಂದಿಗಿನ ಅನೈತಿಕ ಸಂಬಂಧವೇ ಕೊಲೆಗೆ ಕಾರಣವೆಂದು ತಿಳಿದುಬಂದಿದೆ.

ಜುಲೈ 31 ರಾತ್ರಿ 10.30 ಕ್ಕೆ ಕಾರಟಗಿಯಿಂದ ಗೂಡುರ ಗೆ ತೆರಳುತ್ತಿದ್ದ, ನಾಗನಕಲ್ಲ ಹತ್ತಿರ ರಾಘವೇಂದ್ರ ರೆಡ್ಡಿಯನ್ನು ಆರೋಪಿ ಗರುಡಪ್ಪ ತನ್ನ ಸ್ನೇಹಿತರೊಂದಿಗೆ ಸೇರಿ ಕಟ್ಟಿಗೆ ಇಂದ ಥಳಿಸಿ ಕೊಲೆ ಮಾಡಿದ್ದಾನೆ ನಂತರ ಇದೊಂದು ಬೈಕ್ ಅಪಘಾತದಿಂದ ಮೃತ ಪಟ್ಟಿರಬಹುದೆಂದು ಎಲ್ಲರು ಭಾವಿಸಿದ್ದರು, ಆದರೆಯ ರೆಡ್ಡಿಯ ತಾಯಿ ಅನುಮಾನ ಗೊಂಡು ಪೊಲೀಸರಿಗೆ ನನ್ನ ಮಗನ ಕೊಲೆ ಆಗಿರಬಹುದೆಂದು ದೂರು ನೀಡಿದ್ದಾಳೆ , ಇದನ್ನು ಬೆನ್ನತ್ತಿದ ಪೊಲೀಸರು, ಕಾರಟಗಿ ಪಿಐ ಸಿದ್ರಾಮಯ್ಯ ಹಾಗೂ ಅವರ ಸಿಬ್ಬಂದಿ ವರ್ಗದವರು ಪ್ರಕರಣ ವನ್ನು ಬೇಧಿಸಿದಾಗ ಸತ್ಯ ಹೊರಬಿದ್ದಿದ್ದು ಆರೋಪಿಯು ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದಾಗಿ , ರೆಡ್ಡಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!