Thursday , September 19 2024
Breaking News
Home / Breaking News / ಅಂಜನಾದ್ರಿಯಿಂದ, ಅಯೋಧ್ಯೆ ಗೆ ಸೈಕಲ್ ಯಾತ್ರೆ ಕೈಗೊಂಡ ಯುವಕ..!

ಅಂಜನಾದ್ರಿಯಿಂದ, ಅಯೋಧ್ಯೆ ಗೆ ಸೈಕಲ್ ಯಾತ್ರೆ ಕೈಗೊಂಡ ಯುವಕ..!

ವರದಿ ಎನ್ ಶಾಮೀದ್ ತಾವರಗೇರಾ

ಗಂಗಾವತಿ:- ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಪರ್ವತದಿಂದ ಗಂಗಾವತಿ ಮೂಲದ ಯುವಕ ರಾಮ ಜನ್ಮ ಭೂಮಿ ಅಯೋಧ್ಯೆ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದು , ಸಾವಿರಾರು ಕಿಲೋಮೀಟರ್ ದೂರದ ವರೆಗೆ ಸೈಕಲ್ ಯಾತ್ರೆ ಕೈಗೊಂಡ ಯುವಕನ ಸಾಹಸದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸುವುದರ ಜೊತೆಗೆ ಶುಭ ಹಾರೈಸಿದ್ದಾರೆ, ಯುವಕನು ಪಟ್ಟಣದ ತುಳಸಪ್ಪ ಚತ್ರದ ನಿವಾಸಿಯಾದ ರಾಜು ಎಂಬ ಯುವಕನೆ ಒಬ್ಬಂಟಿ ಯಾಗಿ ಸೈಕಲ್ ಯಾತ್ರೆ ಕೈಗೊಂಡಿದ್ದಾನೆ , ಜುಲೈ 01, ಶನಿವಾರದಂದು ಅಂಜನಾದ್ರಿ ಪರ್ವತದಲ್ಲಿ ಪೂಜೆ ಸಲ್ಲಿಸಿ , ಸೈಕಲ್ ಯಾತ್ರೆ ಕೈಗೊಳ್ಳುತ್ತಾನೆ.

ಗಂಗಾವತಿ ನಗರದಿಂದ ತಾವರಗೇರಾ , ಲಿಂಗಸಗೂರ, ಕಲಬುರ್ಗಿ, ಬಸವಕಲ್ಯಾಣ ಮಾರ್ಗವಾಗಿ, ಮಹಾರಾಷ್ಟ್ರ ಕ್ಕೆ ತಲುಪಿ ನಂತರ ಉತ್ತರ ಪ್ರದೇಶದ ಅಯೋಧ್ಯೆಯ ಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರಕ್ಕೆ ತೆರಳಲಿದ್ದಾನೆ.

ನಂತರ ಸೈಕಲ್ ಮೂಲಕವೇ ಕೇದಾರನಾಥ, ಬದರಿನಾಥ, ಜಮ್ಮುವಿನ ಲಡಾಖ್ ಗು ಕೂಡ ಪ್ರಯಾಣ ಬೆಳೆಸಲು ಮುಂದಾಗಿದ್ದಾನೆ, ಈ ಯಾತ್ರೆಯು ಯಶಸ್ವಿಯಾಗಲೆಂದು ಪಟ್ಟಣದ ಯುವ ಮಿತ್ರರು ಸೇರಿದಂತೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತಿರ್ಥ ಪಾದಂಗಳ್ಳನವರ ಶುಭ ಹಾರೈಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!