Thursday , September 19 2024
Breaking News
Home / Breaking News / ವಿಷ ಸೇವಿಸಿ ಜೀವನದ ಆಟ ಮುಗಿಸಿದ ದೈಹಿಕ ಶಿಕ್ಷಕ..!

ವಿಷ ಸೇವಿಸಿ ಜೀವನದ ಆಟ ಮುಗಿಸಿದ ದೈಹಿಕ ಶಿಕ್ಷಕ..!

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆಗೆ ಸಂಬಂಧಿಸಿದಂತೆ ಪಟ್ಟಣದ ದೈಹಿಕ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನನ್ನು ಪಟ್ಟಣದ ಬುತ್ತಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಮೂಲಕ ರಾಜು ಬ್ಯಾಡಗಿ ಎಂದು ತಿಳಿದುಬಂದಿದ್ದು , ಕೊಲ್ಲಾಪುರ ಮೂಲದ ಎಂಬಿಬಿ ಕಂಪನಿಯೊಂದರ ಏಜೆಂಟ್ ರಾಗಿ ಕೂಡ ಕೆಲಸ ಮಾಡುತ್ತಿದ್ದುರು.

ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ 6 ತಿಂಗಳಲ್ಲಿ ಹಣ ದ್ವಿಗುಣ ಗೊಳ್ಳುವದಾಗಿ ಕೆಲ ಶಿಕ್ಷಕರು ಹಾಗೂ ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡು , ಕೋಟಿ ಗಟ್ಟಲೆ ಹಣ ಹೂಡಿಕೆ ಮಾಡಿದ್ದನೆಂದು ತಿಳಿದು ಬಂದಿದೆ.
ಸದ್ಯ ಕೆಲಸ ನಿರ್ವಹಿಸುತ್ತಿದ್ದ ಕಂಪನಿ ಮುಚ್ಚಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹಣ ನೀಡುವಂತೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಶಿಕ್ಷಕ ರಾಜು ಬ್ಯಾಡಗಿ ಆತ್ಮಹತ್ಯೆ ಗೆ ಶರಾಣಾಗಿದ್ದಾರೆಂಬುದು ತಿಳಿದು ಬಂದಿದೆ.

ಶಿಕ್ಷಕರು ತಮ್ಮ ಉತ್ತಮ ಕರ್ತವ್ಯ ವನ್ನು ಮರೆತು ಈ ರೀತಿಯ ಮೋಸ ಮಾಡುವ ಕಂಪನಿಗಳಿಗೆ ಶಾಮಿಲಾಗಿ ತಮ್ಮ ಜೀವನದ ಜೊತೆಗೆ ಬೇರೆಯವರ ಜೀವನದಲ್ಲಿ ಕೂಡ, ಆಟವಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!