Thursday , September 19 2024
Breaking News
Home / Breaking News / ಗಂಗಾವತಿ:- ಪೊಲೀಸರ ಮೇಲೆ ಹಲ್ಲೆ..!

ಗಂಗಾವತಿ:- ಪೊಲೀಸರ ಮೇಲೆ ಹಲ್ಲೆ..!

ವರದಿ ಎನ್ ಶಾಮೀದ್ ತಾವರಗೇರಾ

ಗಂಗಾವತಿ:- ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಬ್ಬರ ಮೇಲೆ ಕಿಡಿಗೇಡಿಗಳ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.

ನಡುರಾತ್ರಿ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಿದ , ಗಸ್ತು ಪೊಲೀಸ್ ಪೇದೆಗಳಾದ ಗಂಗಾವತಿ ಸಂಚಾರಿ ಠಾಣೆಯ ಪಿಸಿಗಳಾದ ಶರಣಪ್ಪ, ಹಾಗೂ ಶಿವಕುಮಾರ್ ನಗರದ ಕಿಲ್ಲಾ ಏರಿಯಾದವರು ಎನ್ನಲಾದ ಸುಮಾರು 4-5 ಯುವಕರು ವೀರಭದ್ರೇಶ್ವರ ಗುಡಿಯ ಹತ್ತಿರ ಅನಗತ್ಯವಾಗಿ ಮೋಟಾರ್ ಸೈಕಲ್ ನಲ್ಲಿ ತಿರುಗಾಡುತ್ತಿದ್ದನ್ನು ಕಂಡು ವಿಚಾರಿಸಿದ್ದಕ್ಕಾಗಿ ಪೋಲಿಸರು ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಾಗ ಆರೋಪಿತರು ಶರಣಪ್ಪ ಪಿಸಿ ಇವರಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಬಿಡಿಸಲು ಬಂದ ಇನ್ನೊಬ್ಬ ಪೊಲೀಸ್ ಪೇದೆಗು ಸಹ ಹೊಡೆದಿದ್ದು ಅವರು ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!