ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಗೆಲುವಿಗಾಗಿ ಪಾದಯಾತ್ರೆ ಮಾಡುವ ಮೂಲಕ ನಬೀಸಾಬ ಕುಷ್ಟಗಿ ಸ್ಥಳೀಯ ಶಾಮೀದ್ ಅಲಿ ದರ್ಗಾದಲ್ಲಿ ತಮ್ಮ ಪಾದಯಾತ್ರೆ ಯನ್ನು ಕೊನೆಗಳಿಸಿದರು.
ತಾಲೂಕಿನ ವಕ್ಕಮ ದುರ್ಗಾದ ದೇವಸ್ಥಾನದಿಂದ ಪಾದಯಾತ್ರೆ ಕೈಗೊಂಡು 100 ಕಿಲೋಮೀಟರ್ ಪಾದಯಾತ್ರೆ ಮೂಲಕ ಕ್ರಮಿಸಿ ಇಲ್ಲಿಯ ದರ್ಗಾದಲ್ಲಿ ಕೊನೆಗಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಾಗರ ಭೇರಿ, ಬಸನಗೌಡ ಓಲಿ, ಶಂಭುನಗೌಡ ಪಾಟೀಲ್, ಶಂಕರ್ ಸಿಂಗ್, ನಾರಾಯಣ ಸಿಂಗ್, ಶಿವನಗೌಡ , ಸೇರಿದಂತೆ ಇನ್ನಿತರರಿದ್ದರು.
ಪಕ್ಷ ಸೇರ್ಪಡೆ :- ಪಟ್ಟಣದ 10 ನೇ ವಾರ್ಡಿನಲ್ಲಿ ಗಿರಿಜಾ ವಿ ತಾಳಿಕೋಟಿ ಅವರ ನೇತೃತ್ವದಲ್ಲಿ ಸುಮಾರು 70 ಕ್ಕೂ ಹೆಚ್ಚು ಜನ ಮಹಿಳೆಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಶೇಖರಗೌಡ ಪೊಲೀಸ್ ಪಾಟೀಲ್, ಬಸನಗೌಡ ಓಲಿ, ಶಂಭುನಗೌಡ ಪಾಟೀಲ್, ವೆಂಕಟಸಿಂಗ್ ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.