Friday , September 20 2024
Breaking News
Home / Breaking News / ತಾವರಗೇರಾ:- ವಿದ್ಯುತ್ ಅವಘಡ ವ್ಯಕ್ತಿ ಸಾವು..!

ತಾವರಗೇರಾ:- ವಿದ್ಯುತ್ ಅವಘಡ ವ್ಯಕ್ತಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದು ಹಾಗೂ ಸಿಡಿಲಿ ನಿಂದಾಗಿ ಆಕಳು ಸ್ಥಳದಲ್ಲಿ ಮೃತ ಪಟ್ಟ ಘಟನೆ ಜರುಗಿದೆ.

ಉಮಳಿ ರಾಂಪುರ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದು, ಮೃತ ವ್ಯಕ್ತಿಯನ್ನು ಹಂಚಿನಾಳ ಗ್ರಾಮದ ದೇವಪ್ಪ ವಡ್ಡರ (25) ಎಂದು ತಿಳಿದುಬಂದಿದೆ.
ಉಮಳಿ ರಾಂಪೂರ ಗ್ರಾಮದ ಹನುಮಂತ ಪೂಜಾರ ಎಂಬುವರಿಗೆ ಸೇರಿದ ತೋಟದ ಜಮೀನಿನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮೃತ ಪಟ್ಟಿರುವದಾಗಿ ತಿಳಿದು ಬಂದಿದೆ.


ಸಂಗನಾಳ:- ಗ್ರಾಮದಲ್ಲಿ ತಡರಾತ್ರಿ ಗಾಳಿ, ಮಳೆ ಹಾಗೂ ಸಿಡಿಲು ಬಡಿದ ಪರಿಣಾಮ ಸಂಗನಾಳ ಗ್ರಾಮದ ಸೋಮಣ್ಣ ಕಂಬಳಿ ಎಂಬ ರೈತರ ಜಮೀನಿನ ತಗಡಿನ ಶೆಡ್ ನಲ್ಲಿ ಆಕಳನ್ನು ಕಟ್ಟಿ ಹಾಕಲಾಗಿತ್ತು, ಸಿಡಿಲಿನ ರಭಸಕ್ಕೆ ಆಕಳು ಸ್ಥಳದಲ್ಲೇ ಮೃತ ಪಟ್ಟಿದೆ, ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಅಂದಾಜು 45 ಸಾವಿರ ಮೌಲ್ಯದ ಆಕಳು ಎಂದು ಗುರುತಿಸಲಾಗಿದೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!