ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ:– ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಕಡೆ ಕೊಪ್ಪ ತಾಂಡಾ ದಲ್ಲಿ ನಡೆದಿದೆ.
ಬಂದಿತ ವ್ಯಕ್ತಿಯನ್ನು ಅದೇ ತಾಂಡಾದ ಕುಬೇರಪ್ಪ ಶಿವಪ್ಪ ಪವಾರ ಎಂದು ಗುರುತಿಸಲಾಗಿದೆ, ಆರೋಪಿತನು ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ, ಮಾಹಿತಿ ಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಮುಂದೆ 4 ಲೀಟರ್ ಸಾರಾಯಿ ಸೇರಿದಂತೆ 200 ರೂ ಗಳನ್ನು ವಶಪಡಿಸಿಕೊಂಡಿದ್ದಾರೆ ಈ ಕುರಿತು ಕುಷ್ಟಗಿ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.