Thursday , September 19 2024
Breaking News
Home / Breaking News / ಜೀವದ ಹಂಗು ತೊರೆದು ಪತ್ರಕರ್ತನನ್ನು ಉಳಿಸಿದ, ಪೊಲೀಸ್ ಎಚ್ ಸಿ ನಿಂಗಪ್ಪ ಹೆಬ್ಬಾಳ..!

ಜೀವದ ಹಂಗು ತೊರೆದು ಪತ್ರಕರ್ತನನ್ನು ಉಳಿಸಿದ, ಪೊಲೀಸ್ ಎಚ್ ಸಿ ನಿಂಗಪ್ಪ ಹೆಬ್ಬಾಳ..!

ವರದಿ ಎನ್ ಶಾಮೀದ್ ತಾವರಗೇರಾ

ಗಂಗಾವತಿ: ಕಾಲುವೆಗೆ ಹಾರಿದ ಪತ್ರಕರ್ತರೊಬ್ಬನನ್ನು ತಮ್ಮ ಜೀವದ ಹಂಗು ತೊರೆದು ಕಾಪಾಡಿದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನಿಂಗಪ್ಪ ಹೆಬ್ಬಾಳ ರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಮಯ ಪ್ರಜ್ಞೆ ಯಿಂದಾಗಿ ಆತ್ಮಹತ್ಯೆ ಗೆ ಯತ್ನಿಸಿದ್ದ ಪತ್ರಕರ್ತನನ್ನು ಬದುಕಿಸಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಮೆಚ್ಚುಗೆ ವ್ಯಕ್ತಪಡಿಸಿ ಇಲಾಖೆಯ ಪರವಾಗಿ ಬಹುಮಾನ ಘೋಷಿಸಿದ್ದಾರೆ.

ಪಟ್ಟಣದ ಪರ್ತಕರ್ತ ಬಂಡೇರಾವ ಸಾಲಗಾರರ ಕಿರುಕುಳದಿಂದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಾಟ್ಸಪ್ ಸಂದೇಶವನ್ನು ಗಮನಿಸಿದ ಪರ್ತಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟ ಸ್ವಾಮಿ, ಸಿಬ್ಬಂದಿಗಳಾದ ಮರೀ ಶಾಂತಗೌಡ, ಚಿರಂಜೀವಿ ಸ್ಥಳಕ್ಕೆ ಭೇಟಿ ನೀಡಿದಾಗ ಬಂಡೇರಾವ ಕಾಲುವೆಗೆ ಹಾರಿದ್ದನ್ನು ಗಮನಿಸಿದ ನಿಂಗಪ್ಪ ಹೆಬ್ಬಾಳ ಎಚ್ ಸಿ ತಕ್ಷಣವೇ ಕಾಲುವೆಗೆ ಹಾರಿ ಬಂಡೇರಾವ ಅವರನ್ನು ರಕ್ಷಣೆ ಮಾಡಿ ಮೇಲಕ್ಕೆ ಕರೆದುಕೊಂಡು ಬಂದು ಜೀವ ರಕ್ಷಣೆ ಮಾಡಿದ ನಿಂಗಪ್ಪ ಅವರ ಕರ್ತವ್ಯ ಪ್ರಜ್ಞೆ ಗೆ ಪತ್ರಕರ್ತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!