Thursday , September 19 2024
Breaking News
Home / Breaking News / ಲಿಂಗಸಗೂರನ್ನ ಭ್ರಷ್ಟ ರಾಜಕಾರಣಿಗಳಿಂದ ಮುಕ್ತಿ ಗೊಳಿಸಿ : ಗಾಣದಾಳ

ಲಿಂಗಸಗೂರನ್ನ ಭ್ರಷ್ಟ ರಾಜಕಾರಣಿಗಳಿಂದ ಮುಕ್ತಿ ಗೊಳಿಸಿ : ಗಾಣದಾಳ

ನಾಗರಾಜ್ ಎಸ್ ಮಡಿವಾಳರ

ಮುದಗಲ್ : ಲಿಂಗಸಗೂರು ವಿಧಾನಸಭಾ ಕ್ಷೇತ್ರವನ್ನ ಭ್ರಷ್ಟ ರಾಜಕಾರಣಿಗಳಿಂದ ಮುಕ್ತ ಗೊಳಿಸಿ ಎಂದು ಆಮ್ ಆದ್ಮಿ ಪಕ್ಷದ ಸೇವಕಾಂಕ್ಷಿ  ಶಿವಪುತ್ರ ಗಣದಾಳ ಹೇಳಿದರು.
ಬುಧವಾರ ಪಟ್ಟಣದಲ್ಲಿ ಜನಸಂಪರ್ಕ ಕಾರ್ಯಕ್ರಮ ನಡೆಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು
ಲಿಂಗಸಗೂರು ಕ್ಷೇತ್ರದಲ್ಲಿ  ಸಾವಿರಾರು ಕೋಟಿರೂಪಾಯಿಗಳ  ಭ್ರಷ್ಟಾಚಾರ ನಡೆಯುತ್ತಿರುವುದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿ ಆಡಳಿತದ ನಡೆಸಿದ ಎರೆಡು ಪಕ್ಷಗಳ ನಾಯಕರ ಬಣ್ಣ ಬಯಲಾಗಿದೆ ಇದರಿಂದ ಕ್ಷೇತ್ರದ ಜನ ಎಚ್ಚತ್ತುಕೊಂಡಿದ್ದಾರೆ
ಇಂತಹ ಭ್ರಷ್ಟರಿಗೆ ನಾವು ಮತಹಾಕಿದ್ದೇವೆ ಎಂದು ಪಶ್ಚಾತಾಪ  ಪಡುವಂತಾಗಿದೆ ಮುಂಬರುವ ಚುನಾವಣೆಯಲ್ಲಿ ಇಂತಹ ಭ್ರಷ್ಟರ ಆಟ ನಡೆಯುವುದಿಲ್ಲ ಆಮ್ ಆದ್ಮಿ ಪಕ್ಷ ತನ್ನದೇ ಆದ ತತ್ವ ಸಿದ್ಧಾಂತಗಳಿಂದ  ದೆಹಲಿ, ಪಂಜಾಬ್ ನಲ್ಲಿ ನಡೆದ ಸ್ವಚ್ಚ ಆಡಳಿತ ನಡೆಸಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಹೊಸ ಅಲೆಯನ್ನ ಸೃಷ್ಟಿಸಿದ ಆಮ್ ಆದ್ಮಿ ಪಕ್ಷವನ್ನ  ಲಿಂಗಸಗೂರು ಕ್ಷೇತ್ರದಲ್ಲಿ ಅಧಿಕಾರಕ್ಕೆ ತರಲು  ಕ್ಷೇತ್ರದ ಜನ ತೀರ್ಮಾಸುವ ಈ ಮೂಲಕ ಅನೇಕ ವರ್ಷಗಳಿಂದ ಭ್ರಷ್ಟ ಆಡಳಿತ ನಡೆಸಿದವರನ್ನ ಮನೆಗೆ ಕಳಿಸಿ ಭ್ರಷ್ಟ ಆಡಳಿತಕ್ಕೆ ಜನ ನಾಂದಿ ಹಾಡಲಿದ್ದಾರೆ ಎಂದರು.ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತಾಲೂಕ ಅಧ್ಯಕ್ಷ ಎಮ್. ಆರ್. ಪಾಟೀಲ್, ಶಿವರಾಜ ಗುತ್ತೇದಾರ್,  ಘಟಕಾಧ್ಯಕ್ಷ ವೆಂಕನಗೌಡ್ರು, ಬಲ್ಲೇಶಗೌಡ,ಮೌನೇಶ್, ಫಾರೂಕ್ ಸೇರಿದಂತೆ ಇನ್ನಿತರರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!