Thursday , September 19 2024
Breaking News
Home / Breaking News / ಜನರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕ ನಾಗುವ ಅವಕಾಶ:- ದೊಡ್ಡನಗೌಡ ಪಾಟೀಲ್..!

ಜನರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕ ನಾಗುವ ಅವಕಾಶ:- ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿಯ ಕೆಲಸದ ಜೊತೆಗೆ ಕುಷ್ಟಗಿ ಕ್ಷೇತ್ರದಾದ್ಯಂತ ಹಾಲಿ ಶಾಸಕರ ವಿರುದ್ದ ವಿರೋಧಿ ಅಲೆ ಕಂಡು ಬರುತ್ತಿದ್ದು ಈ ಬಾರಿ ನಿಮ್ಮೆಲ್ಲರ ಆರ್ಶಿವಾದದೊಂದಿಗೆ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಲು ನಿಮ್ಮ ಒಲವು ನಮ್ಮ ಮೇಲಿರಲಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ‌ ದೊಡ್ಡನಗೌಡ ಪಾಟೀಲ್ ಹೇಳಿದರು.

ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದರು. ನಂತರ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಶಾಸಕರ ನಡೆಯನ್ನು ಖಂಡಿಸಿರುವ ಕ್ಷೇತ್ರದ ಜನತೆ ಈ ಬಾರಿ ಬಿಜೆಪಿಯತ್ತ ಮುಖ ಮಾಡಿದ್ದು, ಜಯ ಸಿಗಲಿದೆ ಎಂಬ ಭರವಸೆ ಕ್ಷೇತ್ರದಲ್ಲಿ ತಿಳಿದುಬಂದಿದೆ.

ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭದ‌ ಕಾರ್ಯಕ್ರಮದಲ್ಲಿ ಅಂಕಲಿ‌ ಮಠದ ಶ್ರೀ ವೀರಭದ್ರೇಶ್ವರ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಹಳ್ಳೂರ, ಶೇಖರಗೌಡ ಪೊಲೀಸ್ ಪಾಟೀಲ್, ಕೆ.ಮಹೇಶ್, ವೀರಭದ್ರಪ್ಪ ನಾಲತವಾಡ, ರಮೇಶ ಗಿರಣಿ, ಮಲ್ಲನಗೌಡ‌ ಓಲಿ, ಶರಣಪ್ಪ ಐಲಿ,ಮೆಣೇಧಾಳ ಗ್ರಾ.ಪಂ ಅಧ್ಯಕ್ಷ ಬಾಷುಸಾಬ, ಕಿಲ್ಲಾರಹಟ್ಟಿ ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ಗರ್ಜಿನಾಳ, ಪಪಂ ಸದಸ್ಯರಾದ ಬಸನಗೌಡ ಓಲಿ, ಶಾಮೂರ್ತಿ ಅಂಚಿ, ದಶರಥ ಸಿಂಗ್, ಶಿವನಗೌಡ ಪಾಟೀಲ್,

ಮುಖಂಡರಾದ ಸಾಗರ ಬೇರಿ, ಮಂಜುನಾಥ ಜೂಲಕುಂಟಿ, ನಾಗರಾಜ ನಂದಾಪುರ, ಮರಿಯಪ್ಪ ಬಿಸ್ತಿ, ಅರುಣ್ ನಾಲತವಾಡ, ಸೇರಿದಂತೆ ತಾವರಗೇರಾ ಹೋಬಳಿಯ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು.

ಈದೇ ಸಂದರ್ಭದಲ್ಲಿ ಸ್ಥಳೀಯ ಹಾಲುಮತ ಸಮಾಜದ ವತಿಯಿಂದ ವಿಷೇಶವಾಗಿ ಆಯೋಜಿಸಿದ್ದ 50 ಕೆಜಿ ಯ ಕೇಕ್ ಅನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಕಾರ್ಯಕ್ರಮವನ್ನು ನಾರಾಯಣ್ ಸಿಂಗ್ ಆನೇರಿ, ಸ್ವಾಗತಿಸಿದರು, ಲಕ್ಣ್ಮಣ ಸಿಂಗ್ ವಗರನಾಳ ನಿರೂಪಿಸಿದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!