Thursday , September 19 2024
Breaking News
Home / Breaking News / ರಾಷ್ಟ್ರಪತಿಗಳ ಹೆಸರಿನಲ್ಲಿ  ಕುಂಭ ಕಳಷ ರಸೀದಿ ಪಡೆದ ಮಸ್ಕಿ ಪತ್ರಕರ್ತ

ರಾಷ್ಟ್ರಪತಿಗಳ ಹೆಸರಿನಲ್ಲಿ  ಕುಂಭ ಕಳಷ ರಸೀದಿ ಪಡೆದ ಮಸ್ಕಿ ಪತ್ರಕರ್ತ

ನಾಗರಾಜ್ ಎಸ್ ಮಡಿವಾಳರ 
ಮಸ್ಕಿ : ಪಟ್ಟಣದ ಶ್ರೀ  ಭ್ರಮರಾಂಬಾ ದೇವಿ ದೇವಸ್ಥಾನದ ಶ್ರೀ ಮಹಾದೇವಿ ಕುಂಭಾಭಿಷೇಕ ಕಾರ್ಯಕ್ರಮದ ನಿಮಿತ್ಯ ಸ್ಥಳೀಯ ಹೊಸದಿಗಂತ ಪತ್ರಿಕೆಯ ಪತ್ರಕರ್ತ ಸಿದ್ದಯ್ಯ ಹಿರೇಮಠ ರಾಷ್ಟ್ರದ ಮಹಿಳಾ ರಾಷ್ಟ್ರಪತಿ
 ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಕುಂಭ ಕಳಷ ರಶೀದಿ ಪಡೆದು ಅವರ ಹೆಸರಿನಲ್ಲಿ ಓರ್ವ ಮಹಿಳೆಯಿಂದ ಕುಂಭ ಕಳಷ ಹೊರೆಸಲು ಸಿದ್ಧವಾಗಿದ್ದು ವಿಶೇಷವಾಗಿದೆ.
 ಪ್ರತಿ ವರ್ಷದಂತೆ  ದಸರಾದಲ್ಲಿ  ಮಸ್ಕಿ ಶ್ರೀ ಭ್ರಮರಾಂಭಾ ದೇವಸ್ಥಾನದಲ್ಲಿ ದೇವಿ ಪುರಾಣ ಕಾರ್ಯಕ್ರಮವನ್ನು ಮಾಡಲಾಗುತ್ತದೆ, ಪುರಾಣಮಂಗಲ ಕಾರ್ಯಕ್ರಮದವನ್ನ ಶ್ರೀ ಮಹಾದೇವಿ ಅಮ್ಮನವರಿಗೆ ಕುಂಭಾಭಿಷೇಕ ಮಾಡಿ ಹೆಣ್ಣುಮಕ್ಕಳು ಕುಂಭ ಕಳಷ ಹೊತ್ತು ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಪುರಾಣಮಂಗಲವಾಗುತ್ತದೆ ಜನರು  ತಮ್ಮ ಕುಟುಂಬಕ್ಕೆ, ಮಕ್ಕಳು, ಮೊಮ್ಮಕ್ಕಳಿಗೆ ಒಳ್ಳೆಯದಾಗಲಿ ಎಂಬುವಂತೆ ಯುವ ಪತ್ರಕರ್ತ  ಸಿದ್ದಯ್ಯ ಸ್ವಾಮಿ ಹಿರೇಮಠ  ರಾಷ್ಟ್ರಪತಿಗಳಿಗೆ ಮತ್ತು ರಾಷ್ಟ್ರಕ್ಕೆ ಒಳಿತು ಬಯಸಿ ರಾಷ್ಟ್ರಪತಿಗಳ ಹೆಸರಿನಲ್ಲಿ ರಸೀದಿ ಪಡೆದಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!