Thursday , September 19 2024
Breaking News
Home / Breaking News / ತಾವರಗೇರಾ: ನಿಧಿ ಕಳ್ಳರು ಪೊಲೀಸರ ಬಲೆಗೆ..!

ತಾವರಗೇರಾ: ನಿಧಿ ಕಳ್ಳರು ಪೊಲೀಸರ ಬಲೆಗೆ..!

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಜಮೀನಿನಲ್ಲಿಯ ನಿಧಿಯನ್ನು ತೆಗೆಯಲು ಪ್ರಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಶನಿವಾರದಂದು ನಡೆದಿದೆ.

ಠಾಣಾ ವ್ಯಾಪ್ತಿಯ ಅಮರಾಪುರ ತಾಂಡಾ ಸಮೀಪದ ಹಳ್ಳದ ನಾಲದ ಹತ್ತಿರ ಇರುವ ಜಮೀನೊಂದರಲ್ಲಿ ಗುಂಡಿಯನ್ನು ತೆಗೆದು ನಿಧಿಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದಾಗ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿ ಒಟ್ಟು 7 ಜನರಲ್ಲಿ 5 ಜನರನ್ನು ತಕ್ಷಣವೇ ಬಂಧಿಸಿದ್ದು ಉಳಿದ ಇಬ್ಬರು ತಪ್ಪಿಸಿಕೊಂಡು ಹೋಗಿದ್ದಾರೆ. ನಂತರ ಸ್ಥಳದಲ್ಲಿದ್ದ ಕಾರ್ ನಂಬರ್ (K25 P9083) ವಾಹನ ವಶಕ್ಕೆ ಪಡೆದು ಅದೇ ವಾಹನದಲ್ಲಿ ಕರೆದುಕೊಂಡು ಬಂದು ವಿಚಾರಿಸಲಾಗಿ ನಿಧಿ ಕಳ್ಳತನಕ್ಕೆ ಬಂದಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

  ಬಂಧಿತ ಆರೋಪಿಗಳನ್ನು ಗಂಗಾವತಿಯ ಇಂಜಿನಿಯರ್ ಅನಿಲ್ ರಾಜ, ಹಣವಾಳ ಗ್ರಾಮದ ಮಾರುತಿ, ಅಮರಾಪುರ ತಾಂಡಾದ ವೆಂಕಟೇಶ ರಾಠೋಡ ಹಾಗು ಈಶ್ವರ ಚೌಹಾಣ್ ಮತ್ತು ಮಸ್ಕಿ ತಾಲೂಕಿನ ಪ್ರಭು ಹುಲೇಗುಡ್ಡ , ಗಂಗಾವತಿ ವಡ್ಡರ ಹಟ್ಟಿ ಕ್ಯಾಂಪಿನ ಹಸನಸಾಬ ಜುಲಕಟ್ಟಿ ಮತ್ತು ಸಿಂಧನೂರ ತಾಲೂಕಿನ ಪಗಡದಿನ್ನಿ ಕ್ಯಾಂಪಿನ ಶ್ರೀನಿವಾಸ ರಾಠೋಡ ಎಂದು ಗುರುತಿಸಲಾಗಿದೆ. ಈ ಕುರಿತು ಸ್ಥಳೀಯ ಪಿಎಸ್ ಐ ವೈಶಾಲಿ ಝಳಕಿ ಹಾಗೂ ಸಿಬ್ಬಂದಿ ವರ್ಗದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!