Thursday , September 19 2024
Breaking News
Home / Breaking News / ತಾವರಗೇರಾ: ಸಿದ್ದರಾಮಯ್ಯನವರ ವಿರುದ್ದ ನಾನೇ ಪ್ರತಿ ಸ್ಪರ್ಧಿ,- ದೊಡ್ಡನಗೌಡ ಪಾಟೀಲ್..!

ತಾವರಗೇರಾ: ಸಿದ್ದರಾಮಯ್ಯನವರ ವಿರುದ್ದ ನಾನೇ ಪ್ರತಿ ಸ್ಪರ್ಧಿ,- ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕಾಂಗ್ರೆಸ ನಿಂದ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ಬಿಜೆಪಿ ಪಕ್ಷದಿಂದ ನಾನೇ ಪಕ್ಷದ ಅಭ್ಯರ್ಥಿಯಾಗಿರುತ್ತೇನೆ ಎಂದು ಮಾಜಿ ಶಾಸಕರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ಹೇಳಿದರು.

ಅವರು ಭಾನುವಾರದಂದು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತಾನಾಡಿ , ಸಿದ್ದರಾಮಯ್ಯನವರು ಈ ಕ್ಷೇತ್ರ ಕ್ಕೆ ಬರುವುದು ಅನುಮಾನ, ಬಂದರೆ ನಮ್ಮ ಪಕ್ಷದ ಹೈಕಮಾಂಡ ತಿರ್ಮಾನಕ್ಕೆ ನಾನು ಬದ್ದನಿರುತ್ತೆನೆ.


ಕಾಂಗ್ರೆಸ್ ಪಕ್ಷದವರಿಗೆ ಸಂಸ್ಕೃತಿ ಗೊತ್ತಿಲ್ಲ ಮಾಜಿ ಸಚಿವ ತಂಗಡಗಿ ಮೆದುಳಿಗೆ ಹಾಗೂ ನಾಲಿಗೆಗೆ ಸಂಪರ್ಕ ಕಡಿತಗೊಂಡಿದ್ದು. ಸೋಲಿನ ಭೀತಿಯಲ್ಲಿ ಹುಚ್ಚುತನ ಪ್ರದರ್ಶಿಸಿದ್ದಾರೆ ಎಂದರು.

ಹಾಲಿ ಶಾಸಕ ಬಯ್ಯಾಪುರ ವಿರುದ್ಧ ಕ್ಷೇತ್ರದಾದ್ಯಂತ ವಿರೋಧವಿದ್ದು, ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಮೂರು ಹಂತಗಳಲ್ಲಿ ತಾವರಗೇರಾ ಭಾಗದ ಮುಖಂಡರು ಪಕ್ಷಕ್ಕೆ ಸೆರ್ಪಡೆಯಾಗಲಿದ್ದಾರೆ, ಈಗಾಗಲೇ ಮುಖಂಡರಾದ ವೀರಭದ್ರಪ್ಪ ನಾಲತವಾಡ ಹಾಗೂ ಅವರ ಬೆಂಬಲಿಗರನ್ನು ಈ ದಿನ ಸಂಪರ್ಕಿಸಲಾಗಿದ್ದು ಪಕ್ಷಕ್ಕೆ ಬರುವ ಭರವಸೆ ನೀಡಿದ್ದಾರೆ. ಅದರಂತೆ ಮೊದಲ ಹಂತದಲ್ಲಿ ಮುಖಂಡ ಅರುಣಕುಮಾರ ನಾಲತವಾಡ ಹಾಗೂ ಅವರ ಬೆಂಬಲಿಗರು ಬೆಂಗಳೂರಿನಲ್ಲಿ ಇದೇ ದಿನಾಂಕ 18 ರಂದು ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕ ಮಂಡಲ ಅಧ್ಯಕ್ಷ ಬಸವರಾಜ ಹಳ್ಳುರು, ಮುಖಂಡರಾದ ಚಂದ್ರಶೇಖರ ನಾಲತವಾಡ, ನಾದಿರಪಾಷಾ ಮುಲ್ಲಾ, ಸಾಗರ ಭೇರಿ,ಮಂಜುನಾಥ ಜೂಲಕುಂಟಿ, ಶಿವನಗೌಡ ಪೊಲೀಸ್ ಪಾಟೀಲ್, ಪಪಂ ಸದಸ್ಯರಾದ ಬಸನಗೌಡ ಓಲಿ, ಶಾಮೂರ್ತಿ ಅಂಚಿ, ಮುಖಂಡರಾದ ಲಕ್ಷ್ಮಣ ಮುಖಿಯಾಜಿ, ನಾರಾಯಣಸಿಂಗ್ ಹಾನೇರಿ, ರಮೇಶ್ ಗಿರಣಿ, ಗಾದಿಲಿಂಗ, ಅಂಬರೇಶ ಕಾರಟಗಿ, ಮೆಹೆಬೂಬ ಸಿಂಧನೂರ ಸೇರಿದಂತೆ ‌ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!