Thursday , September 19 2024
Breaking News
Home / Breaking News / ಬಿಜೆಪಿ ಸರ್ಕಾರ ಇದ್ದರೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ : ಸಂಜಯಕುಮಾರ

ಬಿಜೆಪಿ ಸರ್ಕಾರ ಇದ್ದರೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ : ಸಂಜಯಕುಮಾರ

ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು : ಬಿಜೆಪಿ ಸರಕಾರ ಇದ್ದರೂ ಕೂಡ ರಾಜ್ಯದ ಬಿಜೆಪಿ ಕಾರ್ಯಕರ್ತರ ನೆತ್ತರು ಹರಿದರು ಕ್ಯಾರೇ ಎನ್ನುತ್ತಿಲ್ಲ, ರಾಜ್ಯದಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ಸಾಮಾಜಿಕ ಜಾಲತಾಣ ಸದಸ್ಯ ಸಂಜಯ ಕುಮಾರ ರಕ್ಕಸಗಿ ಹೇಳಿದರು.
ಪಟ್ಟಣದ ಬಿಜೆಪಿ ಮಂಡಲಾಧ್ಯಕ್ಷ ವೀರನಗೌಡ ಪಾಟೀಲ್ ರವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಾದ ಕುಟ್ಟಪ್ಪ, ಹರ್ಷ, ಶರತ್ ಮಡಿವಾಳ,ರುದ್ರೇಶ್, ದೀಪಕ್,ಈಗ ಪ್ರವೀಣ್ ಇದೆ ರೀತಿಯಲ್ಲಿ ನಿರಂತರವಾಗಿದೆ ಕಾರ್ಯಕರ್ತರ ಮೇಲೆ ಹಲ್ಲೆ ಯಾಗುತ್ತಲೇ ಇದೆ ಇಷ್ಟಾದರೂ ಬಿಜೆಪಿ ನಾಯಕರ  ಪೊಳ್ಳು ಮಾತುಗಳನ್ನು ನಂಬಿ ಪಕ್ಷದ  ಗೆಲುವಿಗಾಗಿ ಹೆಂಡತಿ, ಮಕ್ಕಳು, ಮನೆಯನ್ನ ಬಿಟ್ಟು ಪಕ್ಷದ ಶ್ರೇಯಸ್ಸಿಗಾಗಿ ದುಡಿಯುವ ಯುವಕರಿಗೆ ಬೆಲೆಯೇ ಇಲ್ಲದಂತಾಗಿದೆ ಕಾರ್ಯಕರ್ತರಿಂದ ಪಕ್ಷವೇ ಒರೆತು ಪಕ್ಷದಿಂದ ಕಾರ್ಯಕರ್ತರಲ್ಲ ಇದೆ ಸ್ಥಿತಿ ಮುಂದುವರೆದರೆ ಪಕ್ಷದ ಪೋಸ್ಟರ್ ಅಂಟಿಸಲು ಕಾರ್ಯಕರ್ತನ್ನ ಹುಡುಕುವ ಸ್ಥಿತಿಗೆ ಪಕ್ಷ ತಲುಪಲಿದೆ ನಾವು ಪಕ್ಕ ವಿರೋಧಿಗಳಲ್ಲ ಪಕ್ಷದ ಆಡಳಿತವನ್ನ ವಿರೋಧ ಮಾಡುತ್ತಿದ್ದೇವೆ ಇನ್ನಾದರೂ ಕೇಂದ್ರ ಬಿಜೆಪಿ ವರಿಷ್ಟರು ರಾಜ್ಯ ಸರಕಾರದ  ನಾಯಕರ ಜವಾಬ್ದಾರಿಯನ್ನ ಬದಲಿಸಿ ಕಾರ್ಯಕರ್ತರ ಜೀವಕ್ಕೆ ಬೆಲೆ ನೀಡುವಂತಹ ಕಾರ್ಯ ಮಾಡಲಿ,ಉತ್ತರ ಪ್ರದೇಶದ ಆದಿತ್ಯನಾಥರ ಮಾದರಿ ಆಡಳಿತ ರಾಜ್ಯದಲ್ಲಿ ಬಂದಾಗ ಮಾತ್ರ ಈ ಸರಣಿ ಹಲ್ಲೆಗಳು ತಪ್ಪಿಸಲು ಸಾಧ್ಯ ಎಂದು ರಾಜ್ಯ ಬಿಜೆಪಿ ಸರಕಾರದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!