Thursday , September 19 2024
Breaking News
Home / Breaking News / ಲಿಂಗಸಗೂರು : ಕೊಚ್ಚೆಯಲ್ಲಿ ಉರಳಾಡಿ ಶಾಸಕರ ವಿರುದ್ಧ ಪ್ರತಿಭಟನೆ

ಲಿಂಗಸಗೂರು : ಕೊಚ್ಚೆಯಲ್ಲಿ ಉರಳಾಡಿ ಶಾಸಕರ ವಿರುದ್ಧ ಪ್ರತಿಭಟನೆ

ನಾಗರಾಜ್ ಎಸ್ ಮಡಿವಾಳರ್ 

ಲಿಂಗಸಗೂರು  : ಸತತವಾಗಿ ಸುರಿಯುವ ಮಳೆಯಿಂದ  ಪಟ್ಟಣದ ಮುಖ್ಯ ರಸ್ತೆಯ ಗುಂಡಿಯಲ್ಲಿ ನಿಂತಿದ್ದ ಕೊಚ್ಚೆ  ನೀರಲ್ಲಿ ಉರಳಾಡಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಿಲಾನಿ ಪಾಷಾ ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ನಂತರದ ಮಾತನಾಡಿದ ಕರವೇ ಕಾರ್ಯಕರ್ತ ನಾವು ರಸ್ತೆ ದುರಸ್ಥಿಗಾಗಿ  ಶಾಸಕರಿಗೆ, ಪುರಸಭೆ ಆಡಳಿತ ಮಂಡಳಿಗೆ  ಹಲವು ಬಾರಿ  ಮನವಿ ಮಾಡಿದರು ಕೂಡ ಯಾವುದೇ ದುರಸ್ಥಿ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ ತೋರಿದ್ದಾರೆ. ಇದರಿಂದ ವಾಹನ ಸವರಾರು ಬಿದ್ದು ಸಣ್ಣ ಪುಟ್ಟ ಗಾಯಗಲಿರುವ ಘಟನೆ ನಡೆದಿದೆ ಶಾಸಕರು ಮತ್ತು ಪುರಸಭೆ ಆಡಳಿತ ಮಂಡಳಿ  ಲಿಂಗಸಗೂರು ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅಜಿಜ್ ಪಾಷಾ, ಹನುಮಂತ ನಾಯಕ್, ಅಮರೇಶ್ ಚವಾಣಿ, ಬಸವರಾಜ ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!