Tuesday , September 17 2024
Breaking News
Home / Breaking News / ಗೋ ಪೂಜೆ ಮೂಲಕ ಹರ್ಷ ಮುತಾಲಿಕರ  ಹುಟ್ಟುಹಬ್ಬ ಆಚರಣೆ.

ಗೋ ಪೂಜೆ ಮೂಲಕ ಹರ್ಷ ಮುತಾಲಿಕರ  ಹುಟ್ಟುಹಬ್ಬ ಆಚರಣೆ.

ನಾಗರಾಜ್ ಎಸ್ ಮಡಿವಾಳರ್
ಮುದಗಲ್ :  ಪಟ್ಟಣದ ಗೋ ಶಾಲೆಯಲ್ಲಿ ಮುತಾಲಿಕ್ ರವರ ಹೆಸರಿನಲ್ಲಿ  ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ   ಡಾ. ಈಶ್ವರ ಸವಡಿ ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಮಹಿಳೆಯರಿಗೆ ಹರ್ಷ ಮುತಾಲಿಕರಂತಹ ಸಮಾಜ ಸೇವಕ ಮಕ್ಕಳು ಹುಟ್ಟಲಿ ಎಂದು ಆಶಿಸಿ ಹಣ್ಣು ವಿತರಣೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಹರ್ಷ ಮುತಾಲಿಕ್  ರವರ  ಹುಟ್ಟುಹಬ್ಬ ಆಚರಣೆ ಮಾಡಿದರು.
 ನಂತರ ಮಾತನಾಡಿದ ಪುರಸಭೆ ಸ್ಥಾಯಿ ಸಮಿತಿ ಮಾಜಿ  ಅಧ್ಯಕ್ಷ ಹೇಮಂತ್ ನಾಗಲಾಪುರ ಹಿಂದೂ ಪರ ಕಾಳಜಿಯುಳ್ಳ ಹರ್ಷ ಜಿ ಯುವಕರಿಗೆ  ಆದರ್ಶವಾಗಿದ್ದರೆ ದೇವರು ಅವರಿಗೆ ಸುಖ, ಸಂತೋಷ, ನೆಮ್ಮದಿ ನೀಡಿ ದೇಶ ಸೇವೆ ಮಾಡುವ ಅವಕಾಶ ಸದಾ ನೀಡಲಿ ಅವರ ಸಾಮಾಜಿಕ ಹೋರಾಟಗಳಲ್ಲಿ ಜಯವಾಗಲಿ ಎಂದು ಶುಭಕೋರಿದರು.ಈ ಸಂದರ್ಭ ಡಾ. ಈಶ್ವರ ಸವಡಿ, ಅನಂತ್ ದಾಸ್,ವಿಜಯ್ ಕುಮಾರ್, ಸಣ್ಣ ಸಿದ್ದಯ್ಯ ಸ್ವಾಮಿ, ಗಡ್ದೆಪ್ಪ ಅಡಪದ ,ವಿನೋದ್ ಗುಡಿಮನಿ  ಮಹಾಂತೇಶ್ ಅಕ್ಷತಿ, ವಿಜಯ್ ಪಾಟೀಲ್, ಲಿಂಗಪ್ಪ ಮಡಿವಾಳರ, ಪತ್ರಕರ್ತ  ನಾಗರಾಜ್ ಎಸ್ ಮಡಿವಾಳರ,ಷ್ಣಣ್ಮುಖ ಶಿಂದೆ,ಇನ್ನಿತರರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!