Thursday , September 19 2024
Breaking News
Home / Breaking News / ತಾವರಗೇರಾ:ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದ ಯುವಕ, ತಾನೇ ಅಂತ್ಯವಾದ..!

ತಾವರಗೇರಾ:ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದ ಯುವಕ, ತಾನೇ ಅಂತ್ಯವಾದ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಹುಲಿಯಾಪುರ ಕೆರೆಯಲ್ಲಿ ಮುಳುಗಿ ಮೃತ ‌ಪಟ್ಟ ಯುವಕನ ಅಂತ್ಯ ಸಂಸ್ಕಾರ ಕ್ಕೆ ಆಗಮಿಸುತ್ತಿದ್ದ ಅವರ ಸಂಬಂಧಿಕ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ದಾರುಣ ಘಟನೆ ನಡೆದಿದ್ದು ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದಂತಾಗಿದೆ. ಮೃತ ಯುವಕನನ್ನು ಹಿರೇಮನ್ನಾಪುರ ಗ್ರಾಮದ ಕ್ರಿಕೆಟ್ ಆಟಗಾರನಾದ ರಾಜು (28) ಎಂದು ಗುರುತಿಸಿದ್ದು, ಮತ್ತೊಬ್ಬ ಯುವಕ ಅಮರೇಶ ಮಸ್ಕಿ ತೀವ್ರ ಸ್ವರೂಪದ ಗಾಯಗಳಾಗಿವೆ .

ಘಟನೆಯ ವಿವರ; – ಭಾನುವಾರದಂದು ಹುಲಿಯಾಪುರ ಕೆರೆಯಲ್ಲಿ ಮುಳುಗಿ ಮೃತ ಪಟ್ಟ ಯುವಕ ಬಸವರಾಜ ಮಸ್ಕಿ ಅವರ ಅಂತ್ಯಸಂಸ್ಕಾರ ಕ್ಕೆ ಬೆಂಗಳೂರಿಗೆ ದುಡಿಯಲು ಹೋಗಿದ್ದ ರಾಜು ತೋಟದ ಹಾಗೂ ಅಮರೇಶ ಮಸ್ಕಿ ಬೈಕ್ ನಲ್ಲಿ ಬರುತ್ತಿದ್ದಾಗ ಕೂಡ್ಲಿಗಿ ಸಮೀಪ ಕಾನಾಹೊಸಳ್ಳಿ ಹತ್ತಿರ ಸಂಭಂದಿಸಿದ ಅಪಘಾತದಲ್ಲಿ ಸ್ಥಳದಲ್ಲೆ ಮೃತ ಪಟ್ಟಿರುವುದು ದುರಾದೃಷ್ಟಕರ, ಮೃತ ರಾಜು ತೋಟದ ಇತ್ತಿಚಿಗೆ ನಡೆದ ಕ್ರಿಕೆಟ್ ಟೂರ್ನಾಮೆಂಟ್ ನಲ್ಲಿ ಭಾಗವಹಿಸಿದ್ದನ್ನು ಅವರ ಸ್ನೇಹಿತರು ದುಃಖದಿಂದ ತಮ್ಮ ಅಳಲನ್ನು ತೋಡಿಕೊಂಡರು.
ಒಟ್ಟಿನಲ್ಲಿ ಇಬ್ಬರು ಯುವಕರು ದಾರುಣ ವಾಗಿ ಮೃತ ಪಟ್ಟಿರುವುದು ವಿಷಾದನೀಯವಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!