Thursday , September 19 2024
Breaking News
Home / Breaking News / ತಾವರಗೇರಾ: ಸಿಡಿಲಿಗೆ ಯುವಕ ಹಾಗು 14 ಕುರಿಗಳು ಬಲಿ..!

ತಾವರಗೇರಾ: ಸಿಡಿಲಿಗೆ ಯುವಕ ಹಾಗು 14 ಕುರಿಗಳು ಬಲಿ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಿಡಿಲಿಗೆ ಯುವಕನೊಬ್ಬ ಹಾಗೂ 14 ಕುರಿಗಳು ಬಲಿಯಾದ ಘಟನೆ ತಾವರಗೇರಾ ಠಾಣಾ ವ್ಯಾಪ್ತಿಯ ಹೊಮ್ಮಿನಾಳದಲ್ಲಿ ನಡೆದಿದೆ.

ಮೃತ ಯುವಕನನ್ನು ಸುನೀಲ್ ಯಮನಪ್ಪ ಬಸರಿಹಾಳ (19) ಎಂದು ಗುರುತಿಸಲಾಗಿದೆ. ಪಕ್ಕದ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಯುವಕನು ಕುರಿ ಮೇಯಿಸಲೆಂದು ಹೊಮ್ಮಿನಾಳ ಸೀಮಾ ವ್ಯಾಪ್ತಿಯಲ್ಲಿ ತೆರಳಿದಾಗ ದಿಢೀರ್ ಬಂದ ಸಿಡಿಲಿಗೆ ಯುವಕ‌ ಸ್ಥಳದಲ್ಲೇ ಮೃತಪಟ್ಟಿದ್ದು ಘಟನೆಯಲ್ಲಿ 14 ಕುರಿಗಳು ಬಲಿಯಾಗಿದ್ದು, ಘಟನಾ ಸ್ಥಳವು ತಾವರಗೇರಾ ಬೇವೂರು ಠಾಣಾ ವ್ಯಾಪ್ತಿಯ ಸರ ಹದ್ದಿನಲ್ಲಿ ಜರುಗಿರುವದರಿಂದ ಘಟನಾ ಸ್ಥಳಕ್ಕೆ ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್, ಯಲಬುರ್ಗಾ ಸಿಪಿಐ ನಾಗರೆಡ್ಡಿ, ಬೇವೂರು ಠಾಣೆ ಪಿಎಸ್ಐ ಶೀಲಾ ಮುಗನಗೌಡರ, ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!