ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ: ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ಡಾ. ಎಪಿಜಿ ಅಬ್ದುಲ್ ಕಲಾಂ ಶಾಲಾ ಕಟ್ಟಡ ಹಾಗೂ ಅಟಲ್ ಜಿ ಸಭಾ ಭವನವು ಮಾರ್ಚ 13 ಭಾನುವಾರ ದಂದು ಕೊಪ್ಪಳ ಗವಿ ಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆ ಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಮಾಜಿ ಶಾಸಕರು, ವಿವಿಧ ಮಠದ ಮಠಾಧೀಶರು ಹಾಗೂ ಇಲಕಲ್ ಹಜರತ ಸಯ್ಯದ್ ಶಾ ಅಬ್ದುಲ್ ಖಾದ್ರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆಂದು ರೆಹಮಾನಸಾಬ ದೊಡ್ಡಮನಿ ತಿಳಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಾಲ್ಕು ಜೊತೆ ಸಾಮೂಹಿಕ ವಿವಾಹವು ಹಮ್ಮಿಕೊಂಡಿದ್ದಾರೆ.