Thursday , September 19 2024
Breaking News
Home / Breaking News / 3ದಿನಗಳ ಕಾಲ ಸಾಮಾಜಿಕ ನಾಟಕ ಪ್ರದರ್ಶನ : ಅಶೋಕಗೌಡ  ಪಾಟೀಲ್

3ದಿನಗಳ ಕಾಲ ಸಾಮಾಜಿಕ ನಾಟಕ ಪ್ರದರ್ಶನ : ಅಶೋಕಗೌಡ  ಪಾಟೀಲ್

ನಾಗರಾಜ್ ಎಸ್ ಮಡಿವಾಳರ್
ಮುದಗಲ್ :   ಮೂರು ದಿನಗಳಕಾಲ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಅಶೋಕಗೌಡ ಪಾಟೀಲ್ ಹೇಳಿದರು.
 ಪಟ್ಟಣದಲ್ಲಿ  ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುದಗಲ್ ಪಟ್ಟಣದ ಅಶೋಕಗೌಡ ಕಾಲೋನಿ ಆವರಣದಲ್ಲಿ ಸುರೇಂದ್ರ ಗೌಡ ಹಾಗೂ ಮುದಗಲ್ ಗೆಳೆಯರ ಬಳಗದವರ ಸಹಯೋಗದಲ್ಲಿ ಶಿವಸಂಚಾರ ಸಾಣೆಹಳ್ಳಿ ತಂಡದಿಂದ ಇದೆ 11ರಂದು  ಒಕ್ಕಲಿಗ ಮುದ್ದಣ್ಣ,12 ರಂದು  ಗಡಿಯಂಕ ಕುಡಿಮುದ್ದ, 13
 ರಂದು ಬಸ್ ಕಂಡಕ್ಟರ ಎಂಬುವ ಸಾಮಾಜಿಕ ನಾಟಕಗಳು ಸಂಜೆ 7ಗಂಟೆಗೆ   ಪ್ರದರ್ಶನ  ನಡೆಯಲಿದ್ದು ಪ್ರಸ್ತುತ ಸಮಾಜಕ್ಕೆ ಇಂತಹ ನಾಟಕಗಳು ಅಮೂಲ್ಯ ಹಾಗೂ ಅವಶ್ಯಕೂಡ ಆಗಿವೆ ನಾವೆಲ್ಲ ಸಮಾಜದಲ್ಲಿ ಉತ್ತಮರಾಗಲು ಸಾಮಾಜಿಕ ನಾಟಕಗಳು ಸಹಕಾರಿಯಾಗಲಿವೆ.ಆದ್ದರಿಂದ ಪಟ್ಟಣದ ನಿವಾಸಿಗಳು, ಸುತ್ತಮುತ್ತಲಿನ ಗ್ರಾಮಗಳ ಕಲಾಸಕ್ತ ಬಂಧುಗಳು ಕುಟುಂಬ ಸಮೇತ ಬಂದು ನಾಟಕಗಳನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!