Thursday , September 19 2024
Breaking News
Home / Breaking News / ತಾವರಗೇರಾ: ಕಾಮದಾಸೆಗಾಗಿ ಪ್ರಿಯಕರನೊಂದಿಗೆ ಸೇರಿ, ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ..!

ತಾವರಗೇರಾ: ಕಾಮದಾಸೆಗಾಗಿ ಪ್ರಿಯಕರನೊಂದಿಗೆ ಸೇರಿ, ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ತನ್ನ ಕಾಮದಾಸೆಯನ್ನು ತೀರಿಸಿಕೊಳ್ಳಲು ತಾಯಿಯೊಬ್ಬಳು ಪ್ರಿಯಕರ (ಹಾಲಿ ಗ್ರಾಪಂ ಸದಸ್ಯ) ಹಾಗೂ ಮಗನ ಜೊತೆ ಸೇರಿ ಇನ್ನೊಬ್ಬ ಮಗನನ್ನು ಕೊಲೆ‌ ಮಾಡಿದ ಅಮಾನವೀಯ ಘಟನೆ ನಡೆದಿದ್ದು.

ಇಂತಹ ನೀಚ ತಾಯಿಯು ಇರುತ್ತಾಳೆ ಎಂಬುದು ನಂಬಲು ಅಸಾಧ್ಯವಾದರು, ನಂಬಲೆಬೇಕಾದ ಘಟನೆ ಸಮೀಪದ ಮ್ಯಾದರಡೊಕ್ಕಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ: ಕೊಲೆಯಾದ ವ್ಯಕ್ತಿ ಮ್ಯಾದರ ಡೊಕ್ಕಿ ಗ್ರಾಮದ ಬಸವರಾಜ ಶರಣಪ್ಪ ದೋಟಿಹಾಳ 16-01-2022 ರಂದು ಕಾಣೆಯಾದ ಬಗ್ಗೆ ಇತ್ತೀಚೆಗೆ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಬಗ್ಗೆ ಸಿಪಿಐ ಎನ್ ಆರ್ ನಿಂಗಪ್ಪ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಕೈಗೊಂಡಾಗ ಪ್ರಕರಣ ಬಯಲಿಗೆ ಬಂದಿದ್ದು, ಅದೇ ಗ್ರಾಮದ ಗ್ರಾಪಂ ಸದಸ್ಯ ಅಮರಪ್ಪ ಕಂದಗಲ್ ಎನ್ನುವ ವ್ಯಕ್ತಿಯು ಕೊಲೆಯಾದ ವ್ಯಕ್ತಿಯ ತಾಯಿ ಅಮರಮ್ಮಳೊಂದಿಗೆ ಕಳೆದ 10 ವರ್ಷಗಳಿಂದ ಅನೈತಿಕ ಚಟುವಟಿಕೆ ಹೊಂದಿದ್ದು, ಕೊಲೆಯಾದ ಮಗ ಬಸವರಾಜ ಇದನ್ನು ವಿರೋಧಿಸುತ್ತಾ ಬಂದಿದ್ದು, 16-01-2022 ರಂದು ರಾತ್ರಿ 12 ಗಂಟೆಗೆ ಮನೆಗೆ ತೆರಳಿದಾಗ ಅಲ್ಲೇ ಇದ್ದ ಪ್ರಿಯಕರ ಅಮರಪ್ಪ ಕಂದಗಲ್ ನನ್ನು ನಮ್ಮ ಮನೆಗೆ ಏಕೆ ಬರುತ್ತಿಯಾ ಎಂದು ಪ್ರಶ್ನಿಸಿದ್ದಕ್ಕಾಗಿ ಸಿಟ್ಟಾದ ತಾಯಿ ಅಮರಮ್ಮ, ಸಹೋದರ ಅಮರೇಶ ಹಾಗೂ ಪ್ರಿಯಕರ ಅಮರಪ್ಪ 3 ಜನ ಸೇರಿ ಹೊಡೆದು ನೆಲಕ್ಕೆ ಕೆಡವಿ ತಾಯಿ ಅಮರಮ್ಮ ಮಗನ ಹೊಟ್ಟೆ ಹಾಗೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಅಮರಪ್ಪ ಕಾಲಿನಿಂದ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ಗಟ್ಟಿಸಿ ಕೊಲೆ ಮಾಡಿ ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಪ್ರಿಯಕರ ಅಮರಪ್ಪ ಹಾಗೂ ಸಹೋದರ ಅಮರೇಶ ಸೇರಿ ಬೈಕ್ ಮೇಲೆ ಹೊಲ ಕ್ಕೆ ಹೋಗಿ ಹೂತು ಹಾಕಿದ್ದನ್ನು 3 ಜನ ಆರೋಪಿಗಳು ಒಪ್ಪಿಕೊಂಡಿದ್ದು, 3 ಜನರ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಸಿಪಿಐ ನಿಂಗಪ್ಪ ಎನ್ ಆರ್ ತಿಳಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!