Thursday , September 19 2024
Breaking News
Home / Breaking News / ಕುಂಭಕರ್ಣ ಶಾಸಕರಿಂದ ಅಭಿವೃದ್ಧಿ ಸಾಧ್ಯವಿಲ್ಲ : ಸಿದ್ದು  ಬಂಡಿ

ಕುಂಭಕರ್ಣ ಶಾಸಕರಿಂದ ಅಭಿವೃದ್ಧಿ ಸಾಧ್ಯವಿಲ್ಲ : ಸಿದ್ದು  ಬಂಡಿ

 

ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಕುಂಭಕರ್ಣ ಶಾಸಕರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ್ವರ ಮಠದಲ್ಲಿ ಬುಧವಾರ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಲಿಂಗಸಗೂರು ಶಾಸಕರು ಕುಂಭಕರ್ಣರಿದ್ದಾರೆ ಅವರಿಂದ ಅಭಿವೃದ್ಧಿ ಸಾಧ್ಯವಿಲ್ಲ, ಮುದಗಲ್ ಪಟ್ಟಣದಲ್ಲಿ ಎಂಟು ದಿನಗಳಿಗೊಮ್ಮೆ ಕುಡಿಯುವ ನೀರು ಬರುತ್ತಿವೆ, ರಸ್ತೆಗಳಿಲ್ಲ, ಇನ್ನು ತಾಲೂಕಿನಲ್ಲಿ  ಹತ್ತು ಹಲವಾರು ಸಮಸ್ಯೆಗಳಿದ್ದು ಯಾವುದಕ್ಕೂ ಪರಿಹಾರ ದೊರಕಿಲ್ಲ ಕ್ಷೇತ್ರದ ಜನರ ಸಮಸ್ಯೆಗಳು ಲೆಕ್ಕಕ್ಕಿಲ್ಲ  ಅವರಿಗೆ ಪರ್ಸಟೇಂಜ್ ರಾಜಕೀಯ ಮಾತ್ರ ಬೇಕಿದೆ, ಮಾಜಿ ಶಾಸಕ ಮಾನಪ್ಪ ವಜ್ಜಲ್ ಇದಕ್ಕೆ ಹೊರೆತೆನಲ್ಲ  ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾಗಿದ್ದಾರೆ ಗಣಿಕಾರ್ಮಿಕರ  ಗೋಳು ಕೇಳೋರಿಲ್ಲ, ಸರಕಾರದ ಯೋಜನೆಗಳೆಲ್ಲ  ವಜ್ಜಲರ ಮನೆಗೆ ಯೋಜನೆ ಮಾಡಿಕೊಳ್ಳುತ್ತಾರೆ ವಜ್ಜಲರು  ಯಡಿಯೂರಪ್ಪರನ್ನ ತೃಪ್ತಿ  ಪಡಿಸಲು ಸೀಮಿತವಾಗಿದ್ದಾರೆ, ತಾಲೂಕಿನಲ್ಲಿ ನೀರಾವರಿ 35% ಯೋಜನೆಯಾಗಲು ಕುಮಾರಸ್ವಾಮಿ ರವರೆ ಕಾರಣ ತಾಲೂಕಿನ  ಮಾಜಿ ಹಾಗೂ ಹಾಲಿ ಶಾಸಕರ ಕಾರ್ಯಗಳನ್ನು  ಕ್ಷೇತ್ರದ  ಜನರು ಗಮನಿಸುತ್ತಿದ್ದಾರೆ ಮುಂದೆ ರಾಜ್ಯದಲ್ಲಿ ಮತ್ತು  ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಆಡಳಿತಕ್ಕೆ ಬರಲಿದೆ ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಧ್ಯಕ್ಷ   ಕೆ ನಾಗಬಷಣ,ಘಟಕದ ಅಧ್ಯಕ್ಷ ಅಮೀರ್ ಬೇಗ ಉಸ್ತಾದ್, ತಾಲೂಕಯುವ ಘಟಕದ ಅಧ್ಯಕ್ಷ ಇಮ್ತಿಯಾಜ್,ತಾಲೂಕ ಜೆಡಿಎಸ್ ಮುಖಂಡ ಪರಶುರಾಮ ಕೆಂಭಾವಿ, ತಾಲೂಕ ಪ್ರಧಾನ ಕಾರ್ಯದರ್ಶಿ ಹುಲಗಪ್ಪ ಗುಡಗುಂಟಾ  ಮಾಜಿ ತಾ.ಪಂ ಅಧ್ಯಕ್ಷ ಬಸವರಾಜ್ ಮಕಾಪುರ,ಮಾಜಿ ಪುರಸಭೆ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಪುರಸಭೆ ಸದಸ್ಯ ದುರಗಪ್ಪ ಕಟ್ಟಿಮನಿ, ಪುರಸಭೆ ಸದಸ್ಯೆ ಲತಾ,ಷಣ್ಮುಖಪ್ಪ,ಜೆಡಿಎಸ್  ಮಹಿಳಾ  ಘಟಕದ ಅಧ್ಯಕ್ಷೆ  ತೋಟಮ್ಮ, ಬಾಬು ಉಪ್ಪಾರ, ಮಹೇಬೂಬ ಕಡ್ಡಿಪುಡಿ,ಮುಲ್ಲಾ ಸಾಬ್, ಅನ್ವರ್ ಮಿಯಾ, ಅರುಣ,ಸುರೇಶ್ ಪತ್ತಾರ, ಮಾರುತಿ, ಇನ್ನಿತರ ಜೆಡಿಎಸ್ ಮುಖಂಡರು ಕಾರ್ಯಕರ್ತರು  ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!