Thursday , September 19 2024
Breaking News
Home / Breaking News / ತಾವರಗೇರಾ: ದಯಾ ಮರಣ ಕೋರಿ, ರಾಜ್ಯಪಾಲರಿಗೆ ಮನವಿ..!

ತಾವರಗೇರಾ: ದಯಾ ಮರಣ ಕೋರಿ, ರಾಜ್ಯಪಾಲರಿಗೆ ಮನವಿ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಸಂವಿಧಾನ ರಕ್ಷಣಾ ಸಮಿತಿ ಯವರು ಕಳೆದ 13 ದಿನಗಳಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸಮಿತಿಯ ಸಾಗರ ಬೇರಿ, ಹೇಮರಾಜ ವೀರಾಪುರ, ನಾಗರಾಜ ಹೊಸಮನಿ, ಸಂಜೀವ ಚಲುವಾದಿ, ಗೌತಮ್ ಭಂಡಾರಿ, ಸುರೇಶ ಭಜಂತ್ರಿ, ಅಶೋಕ್ ಭಜಂತ್ರಿ, ಶಂಕ್ರಪ್ಪ ಚಲುವಾದಿ, ಹನುಮೇಶ ಭಜಂತ್ರಿ ಇವರು ಕುಷ್ಟಗಿ ತಹಶಿಲ್ದಾರರ ಮೂಲಕ ದಯಾ ಮರಣ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿ ಇದುವರೆಗೂ ದೂರು ದಾಖಲು ಮಾಡಿಕೊಳ್ಳದೇ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಈವರ ವಿರುದ್ದ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸಮಿತಿ ವತಿಯಿಂದ ರಾಜಾ ನಾಯಕ, ಹೇಮರಾಜ ವೀರಾಪುರ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು ಕೂಡ ಸರ್ಕಾರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂವಿಧಾನ ರಕ್ಷಣಾ ಸಮಿತಿಯ ಮುಖಂಡರು ಸೇರಿದಂತೆ ವಿವಿಧ ಯುವಕರು ಪಾಲ್ಗೊಂಡಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!