Thursday , September 19 2024
Breaking News
Home / Breaking News / ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ದೇವಣ್ಣ ಕೋಡಿಹಾಳ ಸ್ಪರ್ಧೆ….

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ದೇವಣ್ಣ ಕೋಡಿಹಾಳ ಸ್ಪರ್ಧೆ….

ನಾಗರಾಜ್ ಎಸ್ ಮಡಿವಾಳರ್

ರಾಯಚೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಲಿಂಗಸಗೂರು ತಾಲೂಕಿನ ನಾಗರಹಾಳ ಉದಯವಾಣಿ ಪತ್ರಕರ್ತ ದೇವಣ್ಣ ಕೋಡಿಹಾಳ ಜಿಲ್ಲಾ ಪತ್ರಕರ್ತರ ಕಚೇರಿಯ ಚುನಾವಣಾಧಿಕಾರಿಗಳಿಗೆ ಶನಿವಾರ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ಫೆ.27ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಚುನಾವಣೆಗೆ ನಾನು ಕಾರ್ಯಕಾರ್ಯಣಿ ಸಮಿತಿ ಸದಸ್ಯರ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ ಎನ್ನುವ ಭರವಸೆ ನನಗಿದೆ ಎಂದರು. ಈ ಸಂದರ್ಭ ಕಲ್ಯಾಣ ವೈಭವ ಪತ್ರಿಕೆ ಸಂಪಾದಕ ಹನುಮಂತ ನಾಯಕ್, ಉಪಸಂಪಾದಕರಾದ ಜಯರಾಮ ,ಪತ್ರಕರ್ತರಾದ ಡಾ. ಶರಣಪ್ಪ ಆನೆಹೊಸೂರು, ನಾಗರಾಜ್ ಎಸ್ ಮಡಿವಾಳರ್ ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!