Thursday , September 19 2024
Breaking News
Home / Breaking News / ರಚ್ಚುಗೆ ಮೊದಲು Love You ಹೇಳಿದ್ದು ಕೊಪ್ಪಳ ಜಿಲ್ಲೆಯ ತಾವರಗೇರಾದ ಶಂಕರ್ ಈಡಿಗೇರ…!

ರಚ್ಚುಗೆ ಮೊದಲು Love You ಹೇಳಿದ್ದು ಕೊಪ್ಪಳ ಜಿಲ್ಲೆಯ ತಾವರಗೇರಾದ ಶಂಕರ್ ಈಡಿಗೇರ…!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ವರ್ಷದ ಕೊನೆಯ ದಿನದಂದು ತೆರೆ ಕಾಣಲಿರುವ ‘Love You ರಚ್ಚು’ ಸಿನಿಮಾಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಯುವ ಪ್ರತಿಭೆ ಎಂಬುದು ವಿಶೇಷ..!

ನಟಿ ರಚಿತಾ ರಾಮ್ ಹಾಗೂ ನಟ ಅಜಯರಾವ್ ಇವರ ನಟನೆಯ ‘Love You ರಚ್ಚು’ ಸೂಪರ್ ಹಿಟ್ ಚಲನಚಿತ್ರಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ನಿವಾಸಿ ಶಂಕರ್ ಎಸ್ ರಾಜ್ (ಶಂಕರಯ್ಯ ಈಡಿಗೇರ) ಎಂಬುದು ಹೆಮ್ಮೆಯ ಸಂಗತಿ.

ಖ್ಯಾತ ನಿರ್ಮಾಪಕ ಗುರು ದೇಶಪಾಂಡೆಯವರ ನಿರ್ಮಾಣದ ಚಿತ್ರದಲ್ಲಿ ಅಜಯರಾವ್ ಹಾಗೂ ರಚಿತಾ ರಾಮ್ ಅವರ ಅತ್ಯದ್ಭುತ ನಟನೆಯ ಪ್ರೀತಿ, ಪ್ರಣಯ ಪ್ರೇಕ್ಷಕರನ್ನು ಸೆಳೆ ಹಿಡಿಯುವಂತಿದೆ. ಯುವಕರ ಹೃದಯ ಕದ್ದಿರುವ ‘ಗುಳೆ ಕೆನ್ಯೆ’ ಏಕೈಕ ನಟಿ ರಚಿತಾ ರಾಮ್ ಅವರ ‘ರಚ್ಚು’ ಎಂಬ ನರ್ಸರಿ ಕಾರ್ಮಿಕ ಹುಡಗಿಯ ಪಾತ್ರವಂತು ಪಡ್ಡೆ ಹುಡುಗರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕ್ರೈಂವೊಂದರಲ್ಲಿ ಬಾಗಿಯಾದ ಮಡದಿಯನ್ನು ರಕ್ಷಿಸುವಲ್ಲಿ ನಟ ಅಜಯರಾವ್ ಅವರ ಚಿತ್ರದ ಜರ್ನಿಯಂತು ಎಂತವರಲ್ಲಿಯೂ ಕಣ್ಣೀರು ತರಿಸುವಂತಿದೆ. ಚಿತ್ರದಲ್ಲಿನ ‘ರಚ್ಚು’ ಮತ್ತು ‘ಅಜಯ’ ಪಾತ್ರಗಳು ಸ್ಯಾಂಡಲ್ ವುಡ್ ನಲ್ಲಿ ಕನ್ನಡಿಗರ ಮನಸ್ಸು ಗೆಲ್ಲುವ ಮೂಲಕ ದಾಖಲೆ ಮೂಡಿಸಿ, ಗಲ್ಲಾಪೆಟ್ಟಿಗೆ ತುಂಬಲಿವೆ.


Love You ರಚ್ಚು ಸಿನಿಮಾ ಚಂದನ ವನದಲ್ಲಿ ಬಾರಿ ಸದ್ದು ಮಾಡಿದೆ. ಪುಟ್ಟ ಮಕ್ಕಳಿಂದ ಹಿಡಿದು, ಕುಟುಂಬಸ್ಥರೆಲ್ಲರು ಒಟ್ಟಿಗೆ ಕೂಡಿ, ವೀಕ್ಷಿಸಿ ರಂಜಿಸಬಹುದಾದ ಚಿತ್ರವಂತು ಹೌದಾಗಿದೆ. ಉತ್ತರ ಕರ್ನಾಟಕ ಅದರಲ್ಲಿ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ನಿವಾಸಿ ಶಂಕರ್ ಎಸ್ ರಾಜ್ ನಿರ್ದೇಶನದ ಚಿತ್ರವನ್ನು ಕನ್ನಡಿಗರು ಲವ್ ಮಾಡದೇ ಕೈ ಬಿಡುವುದಿಲ್ಲ ಎಂಬ ಮಾತುಗಳು ಸಿನಿಮಾದ ಟೀಸರ್ ಬಿಡುಗಡೆಯಿಂದಲೇ ಕೇಳಿಬರುತ್ತಿವೆ..!!


ಮುದ್ದು ನೀನು.. ಮುದ್ದು ನೀನು…! ಎದೆಯ ನಡೆಸುವ.. ಸದ್ದು ನೀನು..!! ಎಂಬ ಈ ಚಿತ್ರದ ಹಾಡಂತು ಕನ್ನಡಿಗರ ಪಾಲಿಗೆ ಮನೆ ಮಾತಾಗಿದೆ. “

 

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!