Friday , September 20 2024
Breaking News
Home / Breaking News / ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ  ಅವಘಡ : ಸುಮಾರು 800 ಟಯರ್ ಭಸ್ಮ 

ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ  ಅವಘಡ : ಸುಮಾರು 800 ಟಯರ್ ಭಸ್ಮ 

ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು  : ತಾಲೂಕಿನ ಹಟ್ಟಿ
ಚಿನ್ನದ ಗಣಿ ಕಂಪನಿಯಲ್ಲಿ ಶಾಪ್  ಯಾರ್ಡ್ ನಲ್ಲಿ
ರವಿವಾರ ಸಂಜೆ  ಸಣ್ಣನೆ ಬೆಳೆದ ಹುಲ್ಲು
(ಮೇವು)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ. ಯಾರ್ಡ್ ನಲ್ಲಿ
ಸುಮಾರು 800ಕ್ಕೂ ಅಧಿಕ ಹಳೆಯ ಟಯರ್‌ಗಳನ್ನು  ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ. ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಎರೆಡು ಗಂಟೆಗಳ ಕಾಲ ಹೊತ್ತಿ ಉರಿದಿದೆ. ಅಗ್ನಿ ಶಾಮಕ ಸಿಬ್ಬಂದಿ,ಸಾರ್ವಜನಿಕರು ಹಾಗೂ ಚಿನ್ನದ ಗಣಿ ಕಾರ್ಮಿಕರು  ಬೆಂಕಿ ನಂದಿಸುವ
ಕಾರ್ಯದಲ್ಲಿ ತೊಡಗಿದ್ದರು. ಭಾರೀ ಪ್ರಮಾಣದ ಹೊಗೆ ಹೊರಬರುತಿದ್ದಂತ್ತೆ ಸುತ್ತಮೂತ್ತಲಿನ ನಿವಾಸಿಗಳು ಗ್ರಾಮಸ್ಥರು ಆತಂಕಗೊಂಡಿದ್ದು, ಸಮೀಪದಲ್ಲಿಯೇ ಗಣಿಗಾರಿಕೆಗೆ ಬಳಸುವ ಮದ್ದುಗುಂಡುಗಳು ಸಂಗ್ರಹಿಸಿದ ಗೋಡನ್ ಇದ್ದಿದ್ದರಿಂದ  ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!