Friday , September 20 2024
Breaking News
Home / Breaking News / ಸೈನ್ಯ ಸೇರುವ ಕನಸು ಕಂಡಿದ್ದ ಹನುಮನಾಳ ಯುವಕ ಸ್ಮಶಾನದ ಪಾಲಾದ..!

ಸೈನ್ಯ ಸೇರುವ ಕನಸು ಕಂಡಿದ್ದ ಹನುಮನಾಳ ಯುವಕ ಸ್ಮಶಾನದ ಪಾಲಾದ..!

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ದೇಶ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಸೈನ್ಯ ಸೇರಲು ಬಯಸಿದ ತಾಲೂಕಿನ ಹನುಮನಾಳದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ನಡೆದಿದೆ.
ಮೃತ ಯುವಕನನ್ನು ತಾಲೂಕಿನ ಹನುಮನಾಳ ಗ್ರಾಮದ ಸಂಗಮೇಶ ಬಸವರಾಜ ರೋಣದ (19 ) ಎಂದು ಗುರುತಿಸಲಾಗಿದೆ. ನತದೃಷ್ಟ ಯುವಕ ಹಾಗೂ ಇನ್ನು ನಾಲ್ವರು ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರು ಪಟ್ಟಣದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಎಂಬ ಖಾಸಗಿ ಸಂಸ್ಥೆಯಿಂದ ರನ್ನಿಂಗ್ ತರಬೇತಿ ಪಡಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಜಾವ 5 ಗಂಟೆಗೆ ರಸ್ತೆಯ ಮೇಲೆ ಓಡುತ್ತಿದ್ದ ಯುವಕರ ಗುಂಪಿನ ಮೇಲೆ ಕ್ರಷರ್ ವಾಹನ ಡಿಕ್ಕಿಹೊಡೆದ ಪರಿಣಾಮ ಬಸವರಾಜ ಮೃತ ಪಟ್ಟಿದ್ದರೆ, ಮತ್ತೊಬ್ಬ ಯುವಕ ತೀವ್ರ ಗಾಯಗೊಂಡ ಪರಿಣಾಮ ಜೀವನ್ಮರಣದ ನಡುವೆ ಹೊರಾಟ ನಡೆಸುತ್ತಿದ್ದರೆ, ಮೂರು ಜನ ಯುವಕರ ಕಾಲುಗಳಿಗೆ ಪೆಟ್ಟಾಗಿರುವುದು ತಿಳಿದು ಬಂದಿದೆ.

ಸೈನ್ಯ ಸೇರಿ ದೇಶ ಸೇವೆ ಮಾಡಬೇಕು ಅಂದುಕೊಂಡಿದ್ದ 5 ಜನರ ಕನಸು ನುಚ್ಚುನುರಾಗಿರುವುದಂತು ಸತ್ಯ. ಮೃತ ಪಟ್ಟ ಯುವಕನ ಸ್ವಗ್ರಾಮವಾದ ಹನುಮಾನಳದಲ್ಲಿ ಸ್ಮಶಾನ ಮೌನ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!