Friday , September 20 2024
Breaking News
Home / Breaking News / “ಅಪ್ಪು”ವಿನ ಅಂತ್ಯಕ್ರೀಯೆಕ್ಕೂ ಮೊದಲು, ನಮ್ಮನ್ನಗಲಿದ ನಾಲ್ಕು ಕಲಾರತ್ನಗಳು..!

“ಅಪ್ಪು”ವಿನ ಅಂತ್ಯಕ್ರೀಯೆಕ್ಕೂ ಮೊದಲು, ನಮ್ಮನ್ನಗಲಿದ ನಾಲ್ಕು ಕಲಾರತ್ನಗಳು..!

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ:  ರಾಜ್ಯದಲ್ಲಿ ಇಲ್ಲಿಯವರೆಗೂ  ಅಪ್ಪು ಸಾವಿನ ಸುದ್ದಿ ತಿಳಿದು  4 ಜನ ಅಭಿಮಾನಿಗಳು ಸಾವನ್ನಪ್ಪಿದ್ದು ದುರಾದೃಷ್ಟಕರ ವಾಗಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಚಿಕ್ಕಬಗನಾಳ ಗ್ರಾಮದ ಜ್ನಾನೇಷ ನಿಂಗಾಪುರ್ ಒಬ್ಬರಾಗಿದ್ದರೆ. 3 ಜನ ಹೃದಯಾಘಾತದಿಂದ ಮೃತಪಟ್ಟಿದ್ದರೆ, ಒಬ್ಬರು ಮಾತ್ರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಅಪ್ಪಟ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ನಡೆದಿದೆ.  ತಮ್ಮ  ನೆಚ್ಚಿನ ನಟನ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ತಿಳಿಯುತ್ತಿದ್ದಂತೆಯೇ ಸುದ್ದಿಯನ್ನು ನೋಡುತ್ತಲೇ ಆಘಾತ ಗೊಂಡು  ಮೃತ ಪಟ್ಟಿರುವುದು ತಿಳಿದು ಬಂದಿದೆ.

ಶುಕ್ರವಾರದಂದು ಚಾಮರಾಜನಗರ ಜಿಲ್ಲೆಯ ಹನೂರ ತಾಲೂಕಿನ ಮರೂರ ಗ್ರಾಮದ ಮುನಿಯಪ್ಪ (30) ಹೃದಯಾಘಾತದಿಂದ ಮೃತಪಟ್ಟಿದ್ದರೆ, ಬೆಳಗಾವಿಯ ಸಿಂಧೋಳ್ಳಿ ಗ್ರಾಮದ ಹನುಮಂತ ದೇಮಣ್ಣನವರ (33) ಹೃದಯಾಘಾತದಿಂದ ಮೃತಪಟ್ಟಿದ್ದರೆ ಇನ್ನೊಬ್ಬ ಅಭಿಮಾನಿ ವಿಜಯನಗರ ಜಿಲ್ಲೆಯ ಕಮಲಾಪುರ ಪಟ್ಟಣದ ಸಾದಪ್ಪ (50) ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ರೀತಿಯಾಗಿ ಪುನಿತ್ ನ ಅಭಿಮಾನಿಗಳು ಅವರ ಅಂತ್ಯಕ್ರಿಯೆಗು ಮುಂಚೆ ತಮ್ಮ ಜೀವನದ ಪಯಣ ಮುಗಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!