Friday , September 20 2024
Breaking News
Home / Breaking News / ವಿದ್ಯುತ್ ಇಲಾಖೆ ನಿರ್ಲಕ್ಷ : ಸುಟ್ಟು ಬೂದಿಯಾದ 20ಲಕ್ಷ ರೂ ಬೆಳೆ 

ವಿದ್ಯುತ್ ಇಲಾಖೆ ನಿರ್ಲಕ್ಷ : ಸುಟ್ಟು ಬೂದಿಯಾದ 20ಲಕ್ಷ ರೂ ಬೆಳೆ 

ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ಹೊಸೂರು ಗ್ರಾಮದಲ್ಲಿ
ಬುಧವಾರ ಮದ್ಯಾಹ್ನ 12.30ರ ಸುಮಾರಿಗೆ ಹೊಲದಲ್ಲಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ವೈರ್ ಒಂದಕ್ಕೆ ಒಂದು ತಾಗಿ  ಅದರಿಂದ ಉಂಟಾದ ಬೆಂಕಿಯಿಂದ ಸುಮಾರು 12 ಎಕರೆಯಲ್ಲಿ ಇದ್ದ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ .
ಬೆಂಕಿಗೆ ಆಹುತಿಯಾದ ಕಬ್ಬಿನ  ಬೆಳೆ  3ಎಕರೆ ಸಂಗಣ್ಣ ರಾಮಾತ್ನಾಳ ,9ಎಕರೆ ಶರಣಗೌಡ ಬೆರಗಿ ಎಂಬುವವರಿಗೆ ಸೇರಿದ್ದಾಗಿದೆ.  ರೈತರು ತಮ್ಮ ಹೊಲದಲ್ಲಿ   ವಿದ್ಯುತ್ ವೈರ್‌ಗಳನ್ನು  ಕಬ್ಬಿನ ಬೆಳೆಗೆ ತಾಕುವಂತೆ ಕೆಳಗೆ ಇದ್ದವು ವಿದ್ಯುತ್  ಇಲಾಖೆ ನಿರ್ಲಕ್ಷದ ಕಾರಣ ಈ ಅವಘಡ ನಡೆದಿದೆ ಎಂದು ರೈತರು ಕಣ್ಣೀರಿಟ್ಟರು.
  ರೈತರ ಆಕ್ರೋಶ: ವಿದ್ಯುತ್ ಇಲಾಖೆಗೆ ಎಷ್ಟು ಬಾರಿ ಮನವಿ ಮಾಡಿಕೊಂಡರು ಕೂಡ ವಿದ್ಯುತ್ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ ತೋರಿದ್ದರು ಈಗ  ಆ ವಿದ್ಯುತ್ ವೈರ್‌ನಿಂದ ಉಂಟಾದ ಬೆಂಕಿ ಕಿಡಿಯಿಂದ
ಬೆಳೆಗಳಿಗೆ ಬೆಂಕಿ ತಗುಲಿದೆ. ಸಿಬ್ಬಂದಿಗಳು ಸಕಾಲದಲ್ಲಿ  ಸ್ಪಂದಸಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ. ಬೆಂಕಿ ಅನಾಹುತಕ್ಕೆ ವಿದ್ಯುತ್  ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದು, ಬೆಂಕಿ ಅನಾಹುತದಿಂದ ನೊಂದಿರುವ ರೈತರಿಗೆ ನಷ್ಟ ಭರಿಸಿಕೊಡುವಂತೆ ರೈತರು ಆಗ್ರಹಿಸಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!