ವರದಿ : ನಾಗರಾಜ್ ಎಸ್ ಮಡಿವಾಳರ್
ಮಸ್ಕಿ : ಶಾಲಾ ವಿದ್ಯಾರ್ಥಿನಿಯರನ್ನು ಕೈ ಹಿಡಿದು ಏಳೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿಯಾಗುತ್ತಿದ್ದಂತೆ ಪರಾರಿಯಾಗಿರುವ ಅತಿಥಿ ಶಿಕ್ಷಕ ಬಸವರಾಜ ಮತ್ತು ದೈಹಿಕ ಶಿಕ್ಷಕ ವೆಂಕಟೇಶನನ್ನು ಕೂಡಲೇ ಬಂಧಿಸುವಂತೆ ವಟಕಲ್ ಗ್ರಾಮಸ್ಥರು ಸೇರಿದಂತೆ ಪಾಲಕರು ಒತ್ತಾಯಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಅತಿಥಿ ಶಿಕ್ಷಕ ಬಸವರಾಜ ತನ್ನ ಕಾಮುಕ ಬುದ್ದಿಯಿಂದ ವಿದ್ಯಾರ್ಥಿನಿಯರ ಕೈ ಏಳೆದಾಡುವುದು ,ಮಕ್ಕಳ ರೀತಿಯಲ್ಲಿ ಎತ್ತಿಕೊಂಡು ಇಳಿಸುವುದು ಸೇರಿದಂತೆ ಸಂಬಂಧವೇ ಇಲ್ಲದ ಕಾರ್ಯಗಳನ್ನು ವಿದ್ಯಾರ್ಥಿನಿಯರಿಂದ ಮಾಡುವಂತೆ ಹೇಳುತ್ತಿದ್ದ ಶಿಕ್ಷಕನ ವಿಡಿಯೋ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಗಮನಿಸಿದ ವಟಗಲ್ ಗ್ರಾಮಸ್ಥರು ಹಾಗೂ ಪಾಲಕರು ಶಿಕ್ಷಕನ ದುರವರ್ತನೆಗೆ ಬೇಸತ್ತು ಹೋಗಿ, ಶಾಲೆಗೆ ಮುತ್ತಿಗೆ ಹಾಕುವುದಲ್ಲದೆ, ಅಸಭ್ಯ ವರ್ತನೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಅತಿಥಿ ಶಿಕ್ಷಕ ಬಸವರಾಜ ಮತ್ತು ದೈಹಿಕ ಶಿಕ್ಷಕ ವೆಂಕಟೇಶ ಸ್ಥಳದಿಂದ ಈ ಸದ್ಯ ಪರಾರಿಯಾಗಿದ್ದಾರೆ.
ತನಿಖಾ ತಂಡ ರಚನೆ : ವಟಗಲ್ ವಸತಿ ಶಾಲಾ ಘಟನೆಗೆ ಸಂಬಂಧಿಸಿದಂತೆ ಪ್ರಕರಣದ ಸತ್ಯಾಸತ್ಯದ ತನಿಖೆಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಚಿದಾನಂದ ತಂಡ ರಚಿಸಿದ್ದಾರೆ. ತನಿಖೆ ಜೊತೆಗೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವ ಭರವಸೆ ಕೂಡಾ ನೀಡಿದ್ದಾರೆ.