Thursday , September 19 2024
Breaking News
Home / Breaking News / ಅಂಜನಾದ್ರಿ ಬೆಟ್ಟದಲ್ಲಿ ಅತುಲ್ ಕುಮಾರನ ಅವಿವೇಕಿತನ, ಪ್ರಕರಣ ದಾಖಲು..!

ಅಂಜನಾದ್ರಿ ಬೆಟ್ಟದಲ್ಲಿ ಅತುಲ್ ಕುಮಾರನ ಅವಿವೇಕಿತನ, ಪ್ರಕರಣ ದಾಖಲು..!

ವರದಿ ಎನ್ ಶಾಮೀದ್ ತಾವರಗೇರಾ

ಗಂಗಾವತಿ: ಕೋಮು ಸೌಹಾರ್ದತೆಗೆ ಹೆಸರಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಶಾಂತಿ ಸುವ್ಯವಸ್ಥೆ ಗೆ ಭಂಗ ತರಲು ಯತ್ನಿಸಿದ ವ್ಯಕ್ತಿಯೊಬ್ಬನ ವಿರುದ್ದ ಗಂಗಾವತಿ ತಹಶಿಲ್ದಾರ ಯು ನಾಗರಾಜ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆ ವ್ಯಕ್ತಿಯನ್ನು ಮಧುಗಿರಿ ಮೂಲದ ಅತುಲ್ ಕುಮಾರ ಸಬರವಾಲಾ ಎಂದು ಗುರುತಿಸಲಾಗಿದೆ.

ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟದ ಪ್ರವೇಶ ದ್ವಾರದ ಬಳಿ ನಿಂತು ನಾನು ಮೋದಿ ಅಭಿಮಾನಿಯೆಂದು ಉಚ್ಚಾಟ ನಡೆಸಿ ಮುಸ್ಲಿಂ ರ ಬಗ್ಗೆ ಅವಹೇಳನ ಕಾರಿ ಮಾತನಾಡಿದ ವಿಡಿಯೋ ವೊಂದನ್ನು ಹಿಂದು ಸಾಮ್ರಾಟ ಧರ್ಮಸೇನೆ ಫೇಸ್‌ಬುಕ್‌ ಖಾತೆಯ ಲೈವನಲ್ಲಿ ಕೂಗಾಡಿದ್ದಲ್ಲದೇ ಜಿಲ್ಲಾಧಿಕಾರಿಗಳ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಮಾತನಾಡಿದ್ದಾನೆ. ಸುದ್ದಿ ತಿಳಿಯುತಿದ್ದಂತೆಯೇ ಗಂಗಾವತಿ ತಹಶಿಲ್ದಾರ ಯು ನಾಗರಾಜ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಪರೀಶಿಲಿಸುವಷ್ಟರಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!