Thursday , September 19 2024
Breaking News
Home / Breaking News /  ಮುದಗಲ್ : ರಸ್ತೆ ಅಪಘಾತ  ಓರ್ವನ  ಸಾವು 

 ಮುದಗಲ್ : ರಸ್ತೆ ಅಪಘಾತ  ಓರ್ವನ  ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್ : ಪಟ್ಟಣದ ಸಮೀಪದ ಜಾನತಪುರಾ   ಸಮೀಪದಲ್ಲಿ ದ್ವಿಚಕ್ರ ಆಯಾತಪ್ಪಿ ಬಿದ್ದು    ಅಪಘಾತ  ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರಿಗೆ ಗಂಭೀರ ಗಾಯಗಳಾಗಿರುವ  ಘಟನೆ  ನಡೆದಿದೆ. ಮುದಗಲ್  ನಿಂದ  ಜಾನತಪುರದ  ಕಡೆಗೆ ಬರುವ ದ್ವಿಚಕ್ರವಾಹನ  ಸವಾರನ ನಿಯಂತ್ರಣ ತಪ್ಪಿ  ರಸ್ತೆ ಪಕ್ಕದ ಕಲ್ಲಿಗೆ  ಡಿಕ್ಕಿಯಾಗಿ ಪರಿಣಾಮ ಹನುಮಂತ ತಂದೆ ಸಂಗನಬಸಪ್ಪ (46) ಎಂಬುವ ವ್ಯಕ್ತಿ  ಸ್ಥಳದಲ್ಲೇ  ಮೃತಪಟ್ಟಿದ್ದು, ನಿಂಗಪ್ಪ ತಂದೆ ಸಿದ್ದಪ್ಪ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ಮುದಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!