Friday , September 20 2024
Breaking News
Home / Breaking News / ತಾವರಗೇರಾ; ಪಟ್ಟಣದಲ್ಲಿ ನಾಡ ತಹಶೀಲ್ದಾರರಾಗಿದ್ದ , ವೇದವ್ಯಾಸ್ ಮುತಾಲಿಕ್ ಕರೊನಾಗೆ ಬಲಿ..!

ತಾವರಗೇರಾ; ಪಟ್ಟಣದಲ್ಲಿ ನಾಡ ತಹಶೀಲ್ದಾರರಾಗಿದ್ದ , ವೇದವ್ಯಾಸ್ ಮುತಾಲಿಕ್ ಕರೊನಾಗೆ ಬಲಿ..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಈ ಹಿಂದೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ನಾಡ ತಹಶಿಲ್ದಾರರಾಗಿ ಹಾಗೂ ಕುಷ್ಟಗಿಯ ಗ್ರೇಡ್ 2, ಹಾಗೂ  ಗ್ರೇಡ್ 1  ತಹಶಿಲ್ದಾರರಾಗಿ ಸೇವೆ ಸಲ್ಲಿಸಿ ಈಗ ಇಲಕಲ್ಲ ನ ತಹಶಿಲ್ದಾರರ ವೇದವ್ಯಾಸ ಮುತಾಲಿಕ್ (51) ಕರೊನಾಗೆ ಬಲಿಯಾಗಿರುವುದು ನೋವಿನ ಸಂಗತಿಯಾಗಿದೆ‌.

ಕೊಪ್ಪಳ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಕೂಡ ವಿಧಿಯಾಟದಿಂದ ಕರೊನಾ ವೈರಸ್ ನ ಮುಂದೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿರುವುದು ಕುಷ್ಟಗಿ ತಾಲೂಕಿನ ಜನತೆಗೆ ನಂಬಲಾರದ ಸಂಗತಿಯಾಗಿದೆ. ಈ ಹಿಂದೆ ಕುಷ್ಟಗಿ ಸೇರಿದಂತೆ ಹನುಮನಾಳ ಮತ್ತು ಕೊಪ್ಪಳದ ತರಬೇತಿ ಸಂಸ್ಥೆಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ. ಅವರ ನಿಧನ ಕ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ಸೇರಿದಂತೆ ಕುಷ್ಟಗಿ ತಹಶಿಲ್ದಾರ ಎಂ ಸಿದ್ದೇಶ, ಕಂದಾಯ ಇಲಾಖೆ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!