Friday , September 20 2024
Breaking News
Home / Breaking News / ಬಡ ಜನರ ಹೊಟ್ಟೆಗೆ ಬರೆ ಎಳೆದ ಕರೊನಾ ‘ಲಾಕ್’ ಡೌನ್..!

ಬಡ ಜನರ ಹೊಟ್ಟೆಗೆ ಬರೆ ಎಳೆದ ಕರೊನಾ ‘ಲಾಕ್’ ಡೌನ್..!

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಏಪ್ರಿಲ್ 27 ರ ರಾತ್ರಿ 9 ರಿಂದ ಮೇ 12 ರ ಬೆಳಿಗ್ಗೆ 6 ಗಂಟೆಯವರೆಗೆ 14 ದಿನಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗುವುದರಿಂದ ಪಟ್ಟಣದ ಜನರಲ್ಲಿ ಆತಂಕ ಮೂಡಿದ್ದು ಸಂಪೂರ್ಣವಾಗಿ ವ್ಯಾಪಾರ ವಹಿವಾಟುಗಳು ಸ್ಥಗಿತ ಗೊಳ್ಳುವದರಿಂದ ಆರ್ಥಿಕ ಹೊರೆ ಬೀಳುವ ಜೊತೆ ಜೀವನ ನಡೆಸುವುದು ಕೂಡ ಕಷ್ಟದಾಯಕವಾಗಿದೆ. ದಿನ ನಿತ್ಯ ಕೂಲಿ ಮಾಡಿ ಬದುಕುವ ಜನರ ಬದುಕು ಕರೊನಾ ಕರಿ ನೆರಳಿನಿಂದಾಗಿ ಸಂಕಷ್ಟಕ್ಕಿಡಾಗಿದೆ.
ಯಾವ ಸೌಲಭ್ಯಗಳು ಸಿಗುತ್ತದೆ ಎಂಬ ಖಚಿತ ಮಾಹಿತಿ ಕೂಡ ಕೆಲವರಿಗೆ ಇನ್ನು ತಿಳಿಯದಂತಾಗಿದೆ.

ಕಳೆದ ವರ್ಷ ಕೂಡ ಕರೊನಾ ದಿಂದ ಕಂಗಾಲಾಗಿದ್ದ ಜನತೆ ಈ ಬಾರಿಯೂ ಕೂಡ ಅದೇ ಪರಿಸ್ಥಿತಿ ಎದಿರುಸುವಂತಾಗಿರುವುದು ದುರಾದೃಷ್ಟಕರ. ಕರೊನಾ ಜೊತೆ ಜೊತೆಗೆ ಜೀವನ ನಡೆಸುವುದು ಅನಿವಾರ್ಯವಾಗಿದ್ದು ಆದಷ್ಟು ಜನರು ಸಾಮಜಿಕ ಅಂತರ ಕಾಪಾಡಿಕೊಳ್ಳುವದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಬಳಸುವದರೊಂದಿಗೆ ಕರೊನಾ ಮಹಾಮಾರಿ ಹೋಗಲಾಡಿಸಬೇಕೆಂಬುದು ಉದಯ ವಾಹಿನಿಯ ಆಶಯವಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!