Friday , September 20 2024
Breaking News
Home / Breaking News / “ಎಣ್ಣೆ” (ಮದ್ಯ) ಕುಡಿಯಬೇಡ ಎಂದಿದ್ದಕ್ಕೆ ಸೀಮೆ ಎಣ್ಣೆ ಕುಡಿದ..!

“ಎಣ್ಣೆ” (ಮದ್ಯ) ಕುಡಿಯಬೇಡ ಎಂದಿದ್ದಕ್ಕೆ ಸೀಮೆ ಎಣ್ಣೆ ಕುಡಿದ..!

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಎಣ್ಣೆ (ಮದ್ಯ) ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡ ಎಂದು ಸಹೋದರ ಬುದ್ದಿವಾದ ಹೇಳಿದ್ದಕ್ಕೆ ಸೀಮೆ ಎಣ್ಣೆ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಬಸವರಾಜ ಕಲ್ಲಪ್ಪ ಜಿರ್ಲಿ ಎಂಬಾತನೆ ಸೀಮೆ ಎಣ್ಣೆ ಸೇವಿಸಿ ಅಸ್ವಸ್ಥತನಾಗಿ ಕುಷ್ಟಗಿಯ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಮದ್ಯ ಕುಡಿಯಬೇಡ ಎಂದು ತಮ್ಮ ನು ಕಿವಿ ಮಾತು ಹೇಳಿದ್ದಕ್ಕೆ ಮನನೊಂದ ಯುವಕ ಮನೆಯಲ್ಲಿದ್ದ ಸೀಮೆ ಎಣ್ಣೆ ಸೇವಿಸಿದ್ದಾನೆ ನಂತರ ಸಂಕಟ ತಾಳಲಾರದೆ ಮನೆಯವರಿಗೆ ಕರೆ ಮಾಡಿ ಸೀಮೆ ಎಣ್ಣೆ ಕುಡಿದಿರುವದಾಗಿ ತಿಳಿಸಿದ್ದರಿಂದ ಕೂಡಲೇ ಆತನನ್ನು ಕುಷ್ಟಗಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಆತನು ಅಪಾಯದಿಂದ ಪಾರಾಗಿದ್ದಾನೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!