Friday , September 20 2024
Breaking News
Home / Breaking News / ಗುಡುಗು- ಸಿಡಿಲು ಬಡಿದು ಆಕಳು ಕರು ಸಾವು.

ಗುಡುಗು- ಸಿಡಿಲು ಬಡಿದು ಆಕಳು ಕರು ಸಾವು.

ವರದಿ ಆನಂದ ರಜಪೂತ

ಕವಿತಾಳ:  ಪಟ್ಟಣ ಸಮೀಪದ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಮ್ ರಾಮಲದಿನ್ನಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಆಕಳು ಮತ್ತು ಕರು ಸಾವನ್ನಪ್ಪಿದ ಘಟನೆ ನಡೆದಿದೆ.
ಕರಿಯಪ್ಪ ನಾಯಕ ರವರ ಆಕಳು ಮತ್ತು ಕರು ಗುಡುಗು ಸಿಡಿಲು ಮಳೆಗೆ ಮನೆಯ ಮುಂದೆ ಕಟ್ಟಿದ್ದ ಆಕಳು ಮತ್ತು ಕರು ಸಿಡಿಲು ಹೊಡೆತಕ್ಕೆ ಸಾವನ್ನಪ್ಪಿವೆ , ಆಕಳು ಮತ್ತು ಕರು ಯಜಮಾನ ಕರಿಯಪ್ಪ ನಾಯಕ ರವರು ದಿನಾಲು 200 ರೂಪಾಯಿ ಹಾಲು ಮಾರಾಟ ಮಾಡಿ ಜೀವನ ಮಾಡುತ್ತಿದ್ದರು, ಹಾಗೆ ಆಕಳು 40000 ರೂಪಾಯಿ ಕೊಟ್ಟು ಖರೀದಿಗೆ ತಂದಿದ್ದರು ಇದರಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ, ಅದಕ್ಕಾಗಿ ಸರಕಾರದಿಂದ ಏನಾದರೂ ಸಹಾಯ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ, ಸ್ಥಳಕ್ಕೆ ಗ್ರಾಮ ಲೆಕ್ಕಾದಿಕಾರಿ ಅಬುಬೂಕರ , ಪಶು ವೈದ್ಯರಾದ ಡಾ.ಜಯರಾಜ, ಕವಿತಾಳ ಪೊಲಿಸ್ ಠಾಣಿ ಸಿಬ್ಬಂದಿ ಬೇಟಿ ನೀಡಿದ್ದಾರೆ .

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!