Thursday , September 19 2024
Breaking News
Home / Breaking News / ತಾವರಗೇರಾ: ರೈತರ ಬಣಿವೆಗಳಿಗೆ ಬೆಂಕಿ ಅಪಾರ ನಷ್ಟ

ತಾವರಗೇರಾ: ರೈತರ ಬಣಿವೆಗಳಿಗೆ ಬೆಂಕಿ ಅಪಾರ ನಷ್ಟ

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿ ರೈತರು ಹಾಕಿದ ಬಣಿವೆಗಳಿಗೆ ಬೆಂಕಿ ತಗುಲಿ 5 ಬಣಿವೆಗಳು ಸುಟ್ಟು ಹೋದ ಘಟನೆ ಜರುಗಿದೆ. ರೈತರಿಗೆ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಪಟ್ಟಣದ ರೈತರಾದ ಶೇಖಪ್ಪ ಬಾಲಪ್ಪ ಹೊಸಮನಿ ಅವರಿಗೆ ಸೇರಿದ 3 ಬಣಿವೆಗಳು ಹಾಗೂ ಶಿವಪ್ಪ ಮುದುಕಪ್ಪ ಡಂಕನಕಲ್ ಎಂಬುವವರಿಗೆ ಸೇರಿದ 2 ಬಣಿವೆಗಳು ಸುಟ್ಟು ಹೋಗಿವೆ.

ದನ- ಕರುಗಳಿಗೆ ಸಂಗ್ರಹಿಸಿಡಲಾಗಿದ್ದ ಶೆಂಗಾ, ಜೋಳದ ಹೊಟ್ಟು 5 ಬಣಿವೆಗಳು ಬೆಂಕಿಗಾಹುತಿ ಹೊಂದಿದ್ದು ವಿಷಯ ತಿಳಿಯುತ್ತಿದ್ದಂತೆ ಕೆಲ ಯುವಕರು ಬೆಂಕಿ ಆರಿಸಲು ಪ್ರಯತ್ನ ಪಟ್ಟರು ಕೂಡ ಸಾಧ್ಯವಾಗದೇ ರೈತರು ನಷ್ಟ ಅನಯಭವಿಸಿದ್ದು ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ ನಂತರ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!