Friday , September 20 2024
Breaking News
Home / Breaking News / ತಾವರಗೇರಾ: ವಿಶ್ವ ವನ್ಯಜೀವಿ ದಿನದಂದೆ ಬಲೆಗೆ ಬಿದ್ದ ಕರಡಿ

ತಾವರಗೇರಾ: ವಿಶ್ವ ವನ್ಯಜೀವಿ ದಿನದಂದೆ ಬಲೆಗೆ ಬಿದ್ದ ಕರಡಿ

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕಳೆದ 15 ದಿನಗಳ ಹಿಂದೆ ರೈತರ ತೋಟಕ್ಕೆ ದಾಳಿ ಮಾಡಿದ್ದ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.

ಬುಧವಾರ ಮದ್ಯಾಹ್ನ ಪಟ್ಟಣದ ಬಸಪ್ಪ ಗಡಗಿ ಅವರ ತೋಟದ ಹತ್ತಿರ ಇಡಲಾಗಿದ್ದ ಬೋನಿಗೆ ಬಿದ್ದ ಕರಡಿಯನ್ನು ಸೆರೆ ಹಿಡಿದ ಅರಣ್ಯ ಇಲಾಖೆಯವರು ಕುಷ್ಟಗಿಯ ಕಲಕೇರಿ ಫಾರ್ಮ್ ನಲ್ಲಿ ಇರಿಸಿದ್ದು, ಇದನ್ನು ಕಮಲಾಪುರ ಕರಡಿದಾಮಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಉಪ ಅಧಿಕಾರಿ ರಿಯಾಜ ತಿಳಿಸಿದ್ದಾರೆ.

ಈ ಹಿಂದೆ ಕರಡಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಭಯಬೀತಿ ಗೊಂಡಿದ್ದರೆ ರೈತರು ಕರಡಿ ದಾಳಿ ಆತಂಕ ವ್ಯಕ್ತಪಡಿಸಿದ್ದರು. ವಿಪರ್ಯಾಸ ಎನ್ನುವಂತೆ ವಿಶ್ವ ವನ್ಯಜೀವಿ ದಿನವಾದ ಇಂದು ಕರಡಿ ಬೋನ್ ಗೆ ಬಿದ್ದಿರುವುದು ವಿಶೇಷ ವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ರೈತರು ನಿಟ್ಟುಸಿರು ಬಿಟ್ಟಂತಾಗಿದೆ‌.
ಈ ಸಂಧರ್ಬದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಂಕರಗೌಡ ಸೇರಿದಂತೆ ಇನ್ನಿತರರು ಇದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

2 comments

  1. ಒಳ್ಳೆಯ ಕೆಲಸ. ಧನ್ಯವಾದಗಳು.

error: Content is protected !!