Friday , September 20 2024
Breaking News
Home / Breaking News / ರೈತರು ಹಾಗೂ ಅಧಿಕಾರಿಗಳೊಂದಿಗೆ ಪೇರಲ ಹಣ್ಣನ್ನು ತಿಂದು ಸರಳತೆ ಮೆರೆದ ಸಚಿವ ಆರ್ ಶಂಕರ್

ರೈತರು ಹಾಗೂ ಅಧಿಕಾರಿಗಳೊಂದಿಗೆ ಪೇರಲ ಹಣ್ಣನ್ನು ತಿಂದು ಸರಳತೆ ಮೆರೆದ ಸಚಿವ ಆರ್ ಶಂಕರ್

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣಕ್ಕೆ ಆಗಮಿಸಿದ್ದ ತೋಟಗಾರಿಕೆ ಸಚಿವ ಆರ್ ಶಂಕರ್ ಅವರು ರೈತರ ತೋಟಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಕೂಡ ರೈತರೊಂದಿಗೆ ಬೆರೆತು ಇಲ್ಲಿಯ ಅಂಬಣ್ಣ ಕಂದಗಲ್ ಅವರ ತೋಟಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸರಳತೆ ಮೆರೆದು ತಾವೇ ತೋಟದಲ್ಲಿಯ ಪೇರಲ ಹಣ್ಣಿನ ರುಚಿ ಸವಿದಿರುವುದು ಅಲ್ಲಿ ನೆರೆದಿದ್ದ ರೈತರಿಗೂ ಹಾಗೂ ಸಾರ್ವಜನಿಕರಿಗೂ ಆಶ್ಚರ್ಯದ ಜೊತೆಗೆ ಸಚಿವರ ಸರಳ ಸಜ್ಜನಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಇಲಾಖೆ ಅಧಿಕಾರಿಗಳೊಂದಿಗೆ ತಮ್ಮ ಕುಟುಂಬದ ಸದಸ್ಯರಂತೆ ಇಲಾಖೆಯ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಕೂಡ ಎಲ್ಲರ ಗಮನ ಸೆಳೆಯಿತು.

ನಂತರ ಇಲ್ಲಿಯ ನಂದಿ ಆಗ್ರೋ ಫಾರಂ ಹೌಸ ನ ರೈತ ಬಸಯ್ಯ ಹಿರೇಮಠ ಅವರು ನುಗ್ಗೆ ಸೊಪ್ಪಿನಿಂದ ತಯಾರಿಸಿದ ಮಾತ್ರೆಗಳನ್ನು ಖರೀದಿ ಮಾಡಿಕೊಂಡರು ನಂತರ ಅಂಬಣ್ಣ ಕಂದಗಲ್ ಅವರ ಪೇರಲ ತೋಟಕ್ಕೆ ತೆರಳಿ ಪೇರಲ ತಳಿ ಹಾಗೂ ಮಾರುಕಟ್ಟೆ ಯ ಬಗ್ಗೆ ಚರ್ಚಿಸಿದ್ದು ವಿಶೇಷವಾಗಿತ್ತು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!