Thursday , September 19 2024
Breaking News
Home / Breaking News / ಬೈಕ್ ತೊಳೆಯಲು ಹೋಗಿ ವಿದ್ಯಾರ್ಥಿ ನೀರುಪಾಲು

ಬೈಕ್ ತೊಳೆಯಲು ಹೋಗಿ ವಿದ್ಯಾರ್ಥಿ ನೀರುಪಾಲು

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ ಸಮೀಪದ ಹುಲಿಯಾಪುರ ಗ್ರಾಮದ ಯುವಕ ಕೆರೆಯಲ್ಲಿ ಬೈಕ್ ತೊಳೆಯಲು ಹೋಗಿ ಜಾರಿ ಬಿದ್ದು ಮೃತಪಟ್ಟ ಘಟನೆ ಜರುಗಿದೆ.
ಮೃತ ಯುವಕ ಹುಲಿಯಾಪುರ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮುಸ್ತಫಾ ಮೈಹಿಬೂಬಸಾಬ ಹನಮಸಾಗರ (19) ವರ್ಷ ಎಂದು ತಿಳಿದುಬಂದಿದೆ‌.
ರವಿವಾರ ದಂದು ಬೈಕ್ ಹಾಗೂ ಬಟ್ಟೆ ತೊಳೆಯಲೆಂದು ಹುಲಿಯಾಪುರ ಕೆರೆಗೆ ಹೋಗಿದ್ದ ಎನ್ನಲಾಗಿದೆ. ಸಂಜೆಯಾದರೂ ವಾಪಸ ಬರದ ಹಿನ್ನೆಲೆ ಬಾಲಕರು ಹಾಗೂ ಗ್ರಾಮಸ್ಥರು ಕೆರೆಯ ದಂಡೆಗೆ ತೆರಳಿದಾಗ ಕೆರೆಯ ದಡದಲ್ಲಿ ಬೈಕ್, ಮೊಬೈಲ್, ಬಟ್ಟೆ ಪತ್ತೆಯಾಗಿದ್ದು ಯುವಕ ಕಣ್ಮರೆಯಾಗಿ ರುವುದು ಕಂಡು ಬಂದಿದ್ದರಿಂದ ಗಾಬರಿಗೊಂಡ ಪಾಲಕರು ಅಗ್ನಿ ಶಾಮಕ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ.

 

ಈ ಹಿನ್ನೆಲೆಯಲ್ಲಿ ಕುಷ್ಟಗಿಯ ಅಗ್ನಿಶಾಮಕ ಠಾಣಾಧಿಕಾರಿ ಎನ್ ರಾಜು ನೇತೃತ್ವದಲ್ಲಿ ರವಿವಾರದ ರಾತ್ರಿಯಿಂದ ಪತ್ತೆ ಕಾರ್ಯಾಚರಣೆ ನಡೆದು ಸೋಮವಾರ ಮಧ್ಯಾಹ್ನ ಶವ ದೊರೆತಿದ್ದು ಸ್ಥಳದಲ್ಲಿದ್ದ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಈ ಕುರಿತು ಸ್ಥಳೀಯ ಠಾಣೆ ಯಲ್ಲಿ ದೂರು ದಾಖಲಾಗಿದೆ. ಪತ್ತೆ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಹುಲಿಯಾಪುರ ಗ್ರಾಮದ ಕೆಲ ಯುವಕರು ಸೇರಿ ಪಾಲ್ಗೊಂಡಿದ್ದರು ಕೂಡ ನಾಪತ್ತೆಯಾಗಿದ್ದ ಯುವಕ ಶವವಾಗಿ ದೊರೆತಿದ್ದು ವಿಪರ್ಯಾಸವೇ ಸರಿ,

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!