Friday , September 20 2024
Breaking News
Home / Breaking News / ಗುಣಮಟ್ಟದ ಕಾಮಗಾರಿ ನಡೆಸಿ : ಡಿ ಎಸ್ ಹೂಲಗೇರಿ

ಗುಣಮಟ್ಟದ ಕಾಮಗಾರಿ ನಡೆಸಿ : ಡಿ ಎಸ್ ಹೂಲಗೇರಿ

 

ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ :  ಸಮೀಪದ ಕೋಮನೂರು ಗ್ರಾಮದಲ್ಲಿ  ಶನಿವಾರ  ಲೋಕೋಪಯೋಗಿ ಇಲಾಖೆ ವತಿಯಿಂದ 2020-21ನೇ ಸಾಲಿನ
ವಿಶೇಷ ಅಭಿವೃದ್ಧಿ (ಎಸ್ ಡಿ ಪಿ)
ಯೋಜನೆಅಡಿಯಲ್ಲಿ 199 ಲಕ್ಷ ರೂ ಮೊತ್ತದ   ರೋಡಲಬಂಡಾ ದಿಂದ ಸಜ್ಜಲಗುಡ್ಡ ವರಗೆ ರಸ್ತೆ ಕಾಮಗಾರಿಗೆ ಲಿಂಗಸುಗೂರು  ಶಾಸಕ  ಡಿ ಎಸ್ ಹೂಲಗೇರಿ ಭೂಮಿ ಪೂಜೆ  ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಗಸಗೂರು  ಶಾಸಕ ಡಿ ಎಸ್ ಹೂಲಗೇರಿ  ನಾವು ತಾಲೂಕಿನ ವಿವಿಧ ಗ್ರಾಮಗಳ  ರಸ್ತೆ  ಅಭಿವದ್ಧಿಗೆ ಕೋಟ್ಯಂತರ ರೂಪಾಯಿಗಳಷ್ಟು  ಅನುದಾನ ನೀಡಲಾಗುತ್ತಿದೆ ಗ್ರಾಮೀಣ ರಸ್ತೆಗಳ ಅಭಿವದ್ಧಿಯಿಂದ ಗ್ರಾಮಗಳ ಜನರ ಜೀವನ ಮಟ್ಟದ ಉತ್ತಮಗೊಳ್ಳಲಿದೆ. ಆದರೆ ಗುತ್ತಿಗೆದಾರರ ಗುಣಮಟ್ಟದ ರಸ್ತೆ ನಿರ್ಮಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು , ಈ ಬಗ್ಗೆ ಗಮನ ಹರಿಸುವಂತೆ ಗುತ್ತಿದಾರರಿಗೆ  ಶಾಸಕ ಡಿ ಎಸ್ ಹೂಲಗೇರಿ ತಾಕೀತು ಮಾಡಿದರು . ಸಂದರ್ಭ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದಸಾಬ,
ಕಾಂಗ್ರೆಸ್  ಮುಖಂಡ ಮಹಾಂತೇಶ್ ಪಾಟೀಲ್ , ಚನ್ನವೀರಪ್ಪ ಪಾಟೀಲ್, ಹನುಮಂತಪ್ಪ  ಕಂದಗಲ್, ಸಂಗಣ್ಣ ಸಾಹುಕಾರ್ , ಪರಮೇಶ ಕನ್ನಾಪೂರಹಟ್ಟಿ, ಚಂದ್ರಶೇಖರ ನಾಯಕ ಕಾಚಾಪೂರು, ಹುಸೇನಸಾಬ ಲೆಕ್ಕಿಹಾಳ ಹಾಗೂ ಗ್ರಾಮಸ್ಥರು ಅಧಿಕಾರಿಗಳು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!