Thursday , September 19 2024
Breaking News
Home / Breaking News / ಸಿಪಿಐ ಎಂ ಎಲ್ ವಾರ್ಷಿಕ ಸ್ಥಾಯಿ ನಿಧಿ ಸಂಗ್ರಹ ಆಂದೋಲನ

ಸಿಪಿಐ ಎಂ ಎಲ್ ವಾರ್ಷಿಕ ಸ್ಥಾಯಿ ನಿಧಿ ಸಂಗ್ರಹ ಆಂದೋಲನ

 

ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್  : ಪಟ್ಟಣದ ಸಿಪಿಐ ಎಂ ಎಲ್ ರೆಡ್ ಸ್ಟಾರ್ ಲಿಂಗಸುಗೂರ ತಾಲೂಕ ಸಮಿತಿಗಳನ್ನು ಮುನ್ನಡೆಸುವ ಸಲುವಾಗಿ ವಾರ್ಷಿಕ ಸ್ಥಾಯಿ ನಿಧಿ ಸಂಗ್ರಹ ಆಂದೋಲನ ನಡೆಸಿದರು.ಪಟ್ಟಣದ ಸಾರ್ವಜನಿಕರಲ್ಲಿ ವ್ಯಾಪಾರಸ್ಥರಲ್ಲಿ ನಿಧಿ ಸಂಗ್ರಹಣೆ ಮಾಡಿದರು ಈ ಸಂದರ್ಭ ಮಾತನಾಡಿದ ಸಿಪಿಐ ಎಂ ಎಲ್ ರೆಡ್ ಸ್ಟಾರ್ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ತಾಲೂಕಿನ ಜನತೆಗಾಗಿ ಮಾಡುವ ಹೋರಾಟಗಳನ್ನು ಬಲಿಷ್ಠಗೋಳಿಸಲು ಉದಾರ ನೆರವಿನೊಂದಿಗೆ ಸಹಕಾರ ನೀಡಿಬೇಕಿದೆ ಕೇಂದ್ರ , ರಾಜ್ಯ ಸರಕಾರಗಳು ಸಂಪೂರ್ಣವಾಗಿ ಜನಧ್ರೋಹಿ ನೀತಿಗಳನ್ನು  ಸಂವಿಧಾನ ಬಾಹಿರ ನಿಲುವನ್ನು ಅನುಸರಿಸುತ್ತಲಿವೆ, ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ-ಕೋಮು ಭಾವನೆಗಳನ್ನು ಕೆರಳಿಸುತ್ತಾ ಜನತೆಯನ್ನು ವಿಭಜಿಸಿ ಆಳುವ ಕುತಂತ್ರ ಜರುಗುತ್ತಲಿದೆ. ತೀವ್ರವಾಗಿ ರೈತರೊಳಗೊಂಡು ಜನತೆಯ ಹೋರಾಟಗಳು  ದೇಶದಲ್ಲಿ ಮುನ್ನಡೆದಿವೆ ಈ ಹೋರಾಟಗಳನ್ನು ಮತ್ತಷ್ಟು ಬಲಪಡಿಸಲು ಜನತೆಯ ನೆರವಿನ ಅವಶ್ಯಕತೆ ಇದೆ ಎಂದರು.ಈ ಸಂದರ್ಭ ತಾಲೂಕಾ ಕಾರ್ಯದರ್ಶಿ ಶಾಂತಕುಮಾರ, ಡಿಕೆ ಲಿಂಗಸುಗೂರ, ಬಸವರಾಜ, ಗೌಸ್ ಸಾಬ ಗುಂತಗೋಳ, ಜಿ ತಿಪ್ಪರಾಜ, ಅಮರೇಶ, ಸೋಮಣ್ಣ, ಭೀಮಣ್ಣ, ಇನ್ನಿತರರು ಇದ್ದರು.

 

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!