Thursday , September 19 2024
Breaking News
Home / Breaking News / ಕುಷ್ಟಗಿ ತಾಲೂಕ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶೇಖರಗೌಡ ಸರನಾಡಗೌಡರ ಆಯ್ಕೆ

ಕುಷ್ಟಗಿ ತಾಲೂಕ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶೇಖರಗೌಡ ಸರನಾಡಗೌಡರ ಆಯ್ಕೆ

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಕುಷ್ಟಗಿ ತಾಲೂಕ 12 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ರಾಗಿ ತಾವರಗೇರಾ ಪಟ್ಟಣದ ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡರ ಆಯ್ಕೆಯಾಗಿದ್ದಾರೆಂದು ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ತಿಳಿಸಿದರು.
ಗುರುವಾರದಂದು ಕುಷ್ಟಗಿ ನಗರದ ಬುತ್ತಿಬಸವೇಶ್ವರ ಶಾಲೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತ ದಿಂದ ನಿರ್ಧರಿಸಲಾಯಿತು.
ಫೆಬ್ರವರಿ 27 ರಂದು ಕುಷ್ಟಗಿ ತಾಲೂಕಿನ ಗುಮಗೇರಿ ಗ್ರಾಮದಲ್ಲಿ ನಡೆಯುವ ತಾಲೂಕ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸರ್ವರ ಅಭಿಪ್ರಾಯ ಪಡೆದು ತಾವರಗೇರಿಯ ಹಿರಿಯ ಸಾಹಿತಿಯವರನ್ನು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಸಂಕಿರಣ ಗೋಷ್ಠಿ ಮತ್ತು ಕವಿಗೋಷ್ಠಿ ನಡೆಸಲು 12 ಜನ ಸಾಧಕರಿಗೆ ಸನ್ಮಾನ ಮಾಡಲು ತೀರ್ಮಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ತಾಲೂಕ ಅಧ್ಯಕ್ಷತೆಯನ್ನು ಉಮೇಶ್ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ, ನಟರಾಜ್ ಸೋನಾರ್, ಶರಣಪ್ಪ ನೀಡಶೇಸಿ, ವಿಶ್ವನಾಥ್ ಅಂಬಲಿಕೊಪ್ಪಮಠ, ರಾಜಾಸಾಬ್ ನದಾಫ್, ಶ್ರೀನಿವಾಸ್ ಕಂಟ್ಲಿ, ಪರಶಿವಮೂರ್ತಿ ಮಾಟಲದಿನ್ನಿ, ಮಹೇಶ್ ನಾಯಕವಾಡಿ, ಬುದ್ನೇಸಾಬ್ ಕಲಾದಗಿ, ಮಲ್ಲಪ್ಪ ಕುದರಿ, ವೆಂಕಟೇಶ್ ಗಂಜಿಹಾಳ ಶರಣಪ್ಪ ಆಡುರ್, ಅಮರೇಶ ಗಲಗಲಿ, ಹನುಮೇಶ ಗುಮಗೇರಿ, ವಿರೇಶ ಬಂಗಾರ ಶೆಟ್ಟರ್, ಮಹೇಶ್ ಜಿ ಇತರರು ಇದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!