Thursday , September 19 2024
Breaking News
Home / Breaking News / ಸಾಲಭಾದೆಯಿಂದ ಮಾನಪ್ಪ ನಾಯಕ ಚಿಲ್ಕರಾಗಿ ನೇಣಿಗೆ ಶರಣು

ಸಾಲಭಾದೆಯಿಂದ ಮಾನಪ್ಪ ನಾಯಕ ಚಿಲ್ಕರಾಗಿ ನೇಣಿಗೆ ಶರಣು

ಉದಯವಾಹಿನಿ

ಕವಿತಾಳ :-
ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಸಾಲಭಾದೆಯಿಂದ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ.

ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಪ್ಪಗೌಡ ಹರ್ವಾಪುರ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ ಸೇರಿದಂತೆ ಹೋರಾಟ ಸಮಿತಿ ಪದಾಧಿಕಾರಿಗಳು ಮಾನಪ್ಪ ನಾಯಕನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಪಾಮನಕಲ್ಲೂರಿನ ಧರಣೆ ಸ್ಥಳದಲ್ಲಿ ರೈತರು ಶ್ರದ್ಧಾಂಜಲಿ ಸಲ್ಲಿಸಿ ಮಾನಪ್ಪ ನಾಯಕರ ಆಶಯಗಳನ್ನು ಈಡೇರಿಸೋಣ, 5ಎ ಕಾಲುವೆ ಜಾರಿಯಾಗುವ ವರೆಗೂ ಹೋರಾಡೋಣ, ಮಾನಪ್ಪ ನಾಯಕ ಅಮರ ರಹೇ ಅನ್ನುವಂತ ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!