Thursday , September 19 2024
Breaking News
Home / Breaking News / ಅಧಿಕಾರಿಗಳ ಎಡವಟ್ಟು: ಬದುಕಿದ್ದರೂ ಸತ್ತ ಫಲಾನುಭವಿ

ಅಧಿಕಾರಿಗಳ ಎಡವಟ್ಟು: ಬದುಕಿದ್ದರೂ ಸತ್ತ ಫಲಾನುಭವಿ

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:  ಅಧಿಕಾರಿಗಳ ಎಡವಟ್ಟಿನಿಂದಾಗಿ ಸಂದ್ಯಾ ಸುರಕ್ಷ ವೃದ್ಧಾಪ್ಯ ವೇತನ ಫಲಾನುಭವಿಯೊಬ್ಬರು ಬದುಕ್ಕಿದ್ದರು ಸಹ ಮರಣ ಹೊಂದಿದ್ದಾರೆಂದು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಬೇಜಾವಬ್ದಾರಿತನ ತೋರಿರುವುದು ಕುಟುಂಬ ವರ್ಗದರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದ ನಿವಾಸಿ ಹುಲಿಗೆಮ್ಮ ಹುಸೇನಪ್ಪ ಕಲಾಲ ಇವರು ಕಳೆದ ಹಲವು ವರ್ಷಗಳಿಂದ ಸಂದ್ಯಾ ಸುರಕ್ಷಾ ಯೋಜನೆಯಡಿ ಪ್ರತಿ ತಿಂಗಳು 1 ಸಾವಿರ ರೂಗಳನ್ನು ಪಡೆಯುತ್ತಿದ್ದರು ಆದರೆ ಕಳೆದ 3 ತಿಂಗಳಿನಿಂದ ಹಣ ಜಮೆಯಾಗದಿರುವದರಿಂದ ಕುಷ್ಟಗಿಯ ಖಜಾನೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಫಲಾನುಭವಿ ಮರಣ ಹೊಂದಿದ್ದಾರೆಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವೇತನ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ವೃದ್ದಾಪ್ಯ ವೇತನದಿಂದ ವಂಚಿತರಾಗಿದ್ದು ಅಧಿಕಾರಿಗಳ ಎಡವಟ್ಟಿನಿಂದ ಬದುಕಿರುವ ಫಲಾನುಭವಿಯು ಮರಣ ಹೊಂದಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಫಲಾನುಭವಿ ಹುಲಿಗೆಮ್ಮ ಕಲಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!