Thursday , September 19 2024
Breaking News
Home / Breaking News / ಗಂಗಾವತಿ ತಾಲೂಕಿನ ಹೊಸ್ಕೇರಿಯ ವಿನೋದ ಪಾಟೀಲ್ ಈಗ ಐಪಿಎಸ್ ಅಧಿಕಾರಿ‌

ಗಂಗಾವತಿ ತಾಲೂಕಿನ ಹೊಸ್ಕೇರಿಯ ವಿನೋದ ಪಾಟೀಲ್ ಈಗ ಐಪಿಎಸ್ ಅಧಿಕಾರಿ‌

ವರದಿ : ಎನ್ ಶಾಮೀದ್ ತಾವರಗೇರಾ

ಗಂಗಾವತಿ:  ತಾಲೂಕಿನ ಹೊಸಕೇರಿ ಗ್ರಾಮದ ವಿನೋದ ಪಾಟೀಲ್ ಈಗ ಐಪಿಎಸ್ ಅಧಿಕಾರಿಯಾಗಿರುವುದು ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾವರಗೇರಾ ಪಟ್ಟಣದ ಉದ್ಯಮಿ ಬಸನಗೌಡ ಮಾಲಿ ಪಾಟೀಲ್ ಹೇಳಿದರು.
ಅವರು ಗಂಗನಾಳದಲ್ಲಿ ವಿನೋದ ಪಾಟೀಲ್ ರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿನೋದ ಪಾಟೀಲ್ ಮೂಲತಃ ಗಂಗಾವತಿ ತಾಲೂಕಿನ ಹೊಸಕೇರಿ ಗ್ರಾಮದವರಾಗಿದ್ದು ಈ ಮಟ್ಟದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.

ನಂತರ ಸನ್ಮಾನ ಸ್ವೀಕರಿಸಿದ ವಿನೋದ ಪಾಟೀಲ್ ಮಾತನಾಡಿ ಕಳೆದ ಅಗಸ್ಟನಲ್ಲಿ ನಡೆದ ಯುಪಿಎಸ್ ಪರೀಕ್ಷೆ ಬರೆದು 132ನೇ ಸ್ಥಾನವನ್ನು ಪಡೆದು ಇದೀಗ ಒಡಿಸ್ಸಾ ರಾಜ್ಯದಲ್ಲಿ ತರಬೇತಿ ಪಡೆಯಲಾಗುತ್ತಿದ್ದು ಈ ಹಿಂದೆ ಐಅರ್ ಎಸ್ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ತೃಪ್ತಿ ಸಿಗದ ಕಾರಣ ಐಪಿಎಸ್ ಆಗಬೇಕು ಅನ್ನುವ ಕನಸಿ ಈಗ ನನಸಾಗಿದೆ.ಮುಂದೆ ನಾನು ಸಾರ್ವಜನಿಕ ಸೇವೆಯಲ್ಲಿ ಉತ್ತಮ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಂಧರ್ಬದಲ್ಲಿ ಲಿಂಗರಾಜ ಹಂಚಿನಾಳ, ಗಂಗನಾಳ ಗ್ರಾಮದ ಮುಖಂಡರು ಪಾಲ್ಗೋಂಡಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!